HEALTH TIPS

ಕೆ.ಎಸ್.ಆರ್.ಟಿ.ಸಿ. ನೌಕರರ ಆರೋಗ್ಯಕ್ಕೆ ಆದ್ಯತೆ ನೀಡಿ ಯೋಜನೆ ರೂಪಿಸಿದ ಸಾರಿಗೆ ಇಲಾಖೆ-ಸಚಿವ ಎ.ಕೆ.ಶಶೀಂದ್ರನ್ ನೀಡಿದ ಮಾಹಿತಿ ಏನೇನು?

   

           ತಿರುವನಂತಪುರ: ಕೆಎಸ್‍ಆರ್‍ಟಿಸಿ ನೌಕರರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಹೆಚ್ಚಿನ ಯೋಜನೆಗಳನ್ನು ಪ್ರಾರಂಭಿಸಲಾಗುವುದು ಎಂದು ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ತಿಳಿಸಿದ್ದಾರೆ.

       ಈ ನಿಟ್ಟಿನಲ್ಲಿ ತಿರುವನಂತಪುರ ಜಿಲ್ಲೆಯ ಮೊಬೈಲ್ ಕ್ಲಿನಿಕ್ ಮತ್ತು ಇತರ ಜಿಲ್ಲೆಗಳ ಸರ್ಕಾರಿ/ ಖಾಸಗಿ ಆಸ್ಪತ್ರೆಗಳಿಗೆ ಮೊಬೈಲ್ ತಪಾಸಣೆ ನಡೆಸಲು 29 ಲಕ್ಷ ರೂ. ಬಿಡುಗಡೆಮಾಡುವುದಾಗಿ ಸಚಿವರು ತಿಳಿಸಿರುವರು.

      ಕಳೆದ ಮೂರೂವರೆ ತಿಂಗಳಲ್ಲಿ ಕೆಎಸ್‍ಆರ್‍ಟಿಸಿಯಲ್ಲಿ ವಿವಿಧ ಆರೋಗ್ಯ ಕಾರಣಗಳಿಂದ 14 ನೌಕರರು ಸಾವನ್ನಪ್ಪಿದ್ದಾರೆ. ಕಳೆದ ಐದು ವರ್ಷಗಳಲ್ಲಿ 388 ನೌಕರರು ವಿವಿಧ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ. ಗುತ್ತಿಗೆ ನೇಮಕಾತಿಗೆ ಅರ್ಜಿ ಸಲ್ಲಿಸಲು 174 ಮಂದಿ ಕಾಯುತ್ತಿದ್ದಾರೆ. ವಾರಕ್ಕೆ ಒಬ್ಬ ಉದ್ಯೋಗಿಗೆ ಸರಾಸರಿ ಸಾವುಗಳು ಉಂಟಾಗುತ್ತಿವೆ.

ಆರೋಗ್ಯ ರಕ್ಷಣೆಯ ಬಗ್ಗೆ ನೌಕರರಲ್ಲಿ ಅರಿವಿನ ಕೊರತೆ ಇರುವುದರಿಂದ ಇಂತಹ ಸಾವುಗಳು ಉಂಟಾಗುತ್ತಿವೆ. ಇದನ್ನು ಪರಿಹರಿಸಲು ನೌಕರರ ಆರೋಗ್ಯ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅವರ ಫಿಟ್‍ನೆಸ್ ಕುರಿತು ತ್ರೈಮಾಸಿಕ ತಪಾಸಣೆ ನಡೆಸುವ ಗುರಿ ಸರ್ಕಾರ ಹೊಂದಿದೆ ಎಮದು ಸಚಿವರು ತಿಳಿಸಿದರು.

      ಚಾಲಕರಿಗೆ ಶಾಖದ ಒತ್ತಡ ತುಂಬಾ ಹೆಚ್ಚಿರುತ್ತದೆ. ಬಸ್‍ಗಳಲ್ಲಿ ಗಾಳಿಯ ಪ್ರಸರಣದ ಕೊರತೆಯಿಂದಾಗಿ ಚಾಲಕರಿಗೆ ಆಗುವ ಅನಾನುಕೂಲತೆಯನ್ನು ನಿವಾರಿಸಲು, ಎಲ್ಲಾ ಬಸ್‍ಗಳಲ್ಲಿ ಗಾಳಿಯ ಪ್ರಸರಣವನ್ನು ಹೆಚ್ಚಿಸಲು ಬದಿಗಳಲ್ಲಿ ಕಿಟಕಿಗಳನ್ನು ನಿರ್ಮಿಸಲಾಗಿದೆ ಮತ್ತು ಕುಡಿಯುವ ನೀರಿಗಾಗಿ ಚಾಲಕನ ಆಸನದ ಬಳಿ ನೀರಿನ ಬಾಟಲಿಯನ್ನು ಸಂಗ್ರಹಿಸಲು ಸೌಲಭ್ಯವನ್ನು ಸ್ಥಾಪಿಸಲಾಗಿದೆ ಎಂದು ಸಚಿವರು ಹೇಳಿದರು.


                        ವೈದ್ಯಕೀಯ ತಪಾಸಣೆಗಾಗಿ ಮೊಬೈಲ್ ಆರೋಗ್ಯ ಕ್ಲಿನಿಕ್:

        ಕೇರಳದ ತಿರುವನಂತಪುರ ಜಿಲ್ಲೆಯಲ್ಲಿ ಕೆಎಸ್‍ಆರ್‍ಟಿಸಿ ಅತಿ ಹೆಚ್ಚು ಡಿಪೆÇೀ ಮತ್ತು ಉದ್ಯೋಗಿಗಳನ್ನು ಹೊಂದಿದೆ. ತಿರುವನಂತಪುರ ಜಿಲ್ಲೆಯೊಂದರಲ್ಲೇ  24 ಡಿಪೆÇೀಗಳಿವೆ.  ಮತ್ತು ಪಪ್ಪನಂಕೋಟೆಯಲ್ಲಿ 25 ಘಟಕಗಳು ಮತ್ತು ಸುಮಾರು 7000 ಉದ್ಯೋಗಿಗಳಿದ್ದಾರೆ. ಅವರ ವೈದ್ಯಕೀಯ ತಪಾಸಣೆಗಾಗಿ ಮೊಬೈಲ್ ಆರೋಗ್ಯ ಚಿಕಿತ್ಸಾಲಯವನ್ನು ಪ್ರಾರಂಭಿಸಲಾಗುವುದು. ಈ ನಿಟ್ಟಿನಲ್ಲಿ, ಪ್ರತಿ ಡಿಪೆÇೀಗೆ ಭೇಟಿ ನೀಡಿ ಸಿಬ್ಬಂದಿಯನ್ನು ಪರೀಕ್ಷಿಸುವ ವೈದ್ಯರು, ನರ್ಸ್ ಮತ್ತು ಲ್ಯಾಬ್ ತಂತ್ರಜ್ಞರೊಂದಿಗೆ ಪರೀಕ್ಷಾ ಪ್ರಯೋಗಾಲ ಹೊಮದಿರುವ ನೂತನ ಬಸ್ ವಿನ್ಯಾಸಗೊಳಿಸಲಾಗುವುದು. ಜೊತೆಗೆ ಡಿಪೆÇೀಗಳ ಸಂಖ್ಯೆ ಕಡಿಮೆ ಇರುವ ಉಳಿದ ಜಿಲ್ಲೆಗಳಲ್ಲಿ ಪ್ರತಿ ಡಿಪೆÇೀ ಮುಖ್ಯಸ್ಥರಿಗೆ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಅಥವಾ ಸರ್ಕಾರಿ ಆಸ್ಪತ್ರೆ ಇಲ್ಲದಿದ್ದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ತಪಾಸಣೆಗೆ ವ್ಯವಸ್ಥೆ ಮಾಡುವಂತೆ ನಿರ್ದೇಶಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿರುವರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries