HEALTH TIPS

ಉಪ್ಪಳದಲ್ಲಿ ಗುಂಡು ಹಾರಿಸಿ ಯುವಕನ ಕೊಲೆಗೆತ್ನಿಸಿದ ಗಾಂಜಾ ಮಾಫಿಯಾ


       ಉಪ್ಪಳ: ಪೊಲೀಸರಿಗೆ ಸವಾಲಾಗಿ ಗಾಂಜಾ ಮಾಫಿಯಾಗಳು ತಮ್ಮ ಅಟ್ಟಹಾಸವನ್ನು ಮತ್ತೆ ಮುಂದುವರಿಸಿದ್ದಾರೆ. ಭಾನುವಾರ ಸಂಜೆ ಐದು ಗಂಟೆಯ ಸುಮಾರಿಗೆ ಯುವಕನೊಬ್ಬನನ್ನು ಹಿಂಬಾಲಿಸಿಕೊಂಡು ಬಂದ ಗಾಂಜಾ ಮಾಫಿಯಾ ತಂಡವೊಂದು ಕಾರನ್ನು ತಡೆದು ನಿಲ್ಲಿಸಿ ಗುಂಡು ಹಾರಿಸಿದ ಬಳಿಕ ಯುವಕನನ್ನು ಕೊಲೆಗೈಯಲು ಯತ್ನಿಸಿದೆ.
      ಕೈ ಕಂಬ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಸ್ವಿಫ್ಟ್ ಕಾರಿನಲ್ಲಿ ಸಂಚರಿಸುತ್ತಿದ್ದ ಯುವಕನನ್ನು ಬ್ರಿಝ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ಕು ಮಂದಿಯ ತಂಡ ಎರಡು ಬಾರಿ ಕಾರಿನ ಗಾಜಿಗೆ ಗುಂಡು ಹಾರಿಸಿ ಬಳಿಕ ತಲ್ವಾರ್ ನಿಂದ ಕಡಿಯಲು ಯತ್ನಿಸಿದೆ . 
     ಸುದ್ಯೆವವಶಾತ್ ಯುವಕ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾನೆ. ಇದೇ  ಸಂದರ್ಭ ರಾಷ್ಟ್ರೀಯ ಹೆದ್ದಾರಿಯಲ್ಲಿ   ಕಾಸರಗೋಡು ಭಾಗಕ್ಕೆ ತೆರಳುತ್ತಿದ್ದ ಆಂಬ್ಯುಲೆನ್ಸ್ ನ ಸೈರಾನ್ ಕೇಳಿದ ತಂಡ ಪೊಲೀಸ್ ಜೀಪಾಗಿರಬಹುದೆಂದು ಭಾವಿಸಿ ಅಲ್ಲಿಂದ ಪರಾರಿಯಾಯಿತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries