ಉಪ್ಪಳ: ಪೊಲೀಸರಿಗೆ ಸವಾಲಾಗಿ ಗಾಂಜಾ ಮಾಫಿಯಾಗಳು ತಮ್ಮ ಅಟ್ಟಹಾಸವನ್ನು ಮತ್ತೆ ಮುಂದುವರಿಸಿದ್ದಾರೆ. ಭಾನುವಾರ ಸಂಜೆ ಐದು ಗಂಟೆಯ ಸುಮಾರಿಗೆ ಯುವಕನೊಬ್ಬನನ್ನು ಹಿಂಬಾಲಿಸಿಕೊಂಡು ಬಂದ ಗಾಂಜಾ ಮಾಫಿಯಾ ತಂಡವೊಂದು ಕಾರನ್ನು ತಡೆದು ನಿಲ್ಲಿಸಿ ಗುಂಡು ಹಾರಿಸಿದ ಬಳಿಕ ಯುವಕನನ್ನು ಕೊಲೆಗೈಯಲು ಯತ್ನಿಸಿದೆ.
ಕೈ ಕಂಬ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಸ್ವಿಫ್ಟ್ ಕಾರಿನಲ್ಲಿ ಸಂಚರಿಸುತ್ತಿದ್ದ ಯುವಕನನ್ನು ಬ್ರಿಝ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ಕು ಮಂದಿಯ ತಂಡ ಎರಡು ಬಾರಿ ಕಾರಿನ ಗಾಜಿಗೆ ಗುಂಡು ಹಾರಿಸಿ ಬಳಿಕ ತಲ್ವಾರ್ ನಿಂದ ಕಡಿಯಲು ಯತ್ನಿಸಿದೆ .