ತಿರುವನಂತಪುರ: ಸಾಕಷ್ಟು ಪರೀಕ್ಷೆಗಳನ್ನು ನಡೆಸದೆ ಕೋವಿಡ್ ಸೋಂಕು ಹರಡುವುದನ್ನು ಮುಚ್ಚಿಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ ಮತ್ತು ಕೋವಿಡ್ ನ್ನು ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ಟೆಸ್ಟ್ಗಳ ಸಂಖ್ಯೆಯನ್ನು ಒಂದು ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಪ್ರತಿಪಕ್ಷದ ನಾಯಕರು ಒತ್ತಾಯಿಸಿರುವರು.
ಕೊವಿಡ್ ಸಾವುಗಳ ಬಗ್ಗೆ ಸರ್ಕಾರ ನಿಖರವಾದ ಅಂಕಿಅಂಶಗಳನ್ನು ಬಿಡುಗಡೆ ಮಾಡುವುದಿಲ್ಲ, ಆದರೂ ಇದು ಆತ್ಮಹತ್ಯೆಗಳು ಮತ್ತು ಕೋವಿಡ್ ಬಾಧಿತರ ಆಕಸ್ಮಿಕ ಸಾವುಗಳನ್ನು ಹೊರತುಪಡಿಸುತ್ತದೆ. ಇದನ್ನು ಗಣನೆಗೆ ತೆಗೆದುಕೊಂಡರೆ ಕೇರಳದ ಕೋವಿಡ್ ಪರಿಸ್ಥಿತಿ ಹದಗೆಡುತ್ತಿದೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ರಮೇಶ್ ಚೆನ್ನಿತ್ತಲ ನಿನ್ನೆ ನೀಡಿರುವ ಹೇಳಿಕೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ದೈನಂದಿನ ಜಿಲ್ಲಾವಾರು ಅಂಕಿಅಂಶಗಳಲ್ಲಿ ವ್ಯಾಪಕ ವಂಚನೆಗಳು, ಸತ್ಯವನ್ನು ಮುಚ್ಚಿಡುವ ಯತ್ನ ಆರಂಭಿದಿಂದಲೇ ಕಂಡುಬಂದಿದೆ. ಸತ್ಯವನ್ನು ಜನರಿಗೆ ತಿಳಿಯಪಡಿಸುವಲ್ಲಿ ದೊಡ್ಡಮಟ್ಟಿನ ಕಾರಸ್ಥಾನವನ್ನು ನಡೆಸುತ್ತಿರುವ ರಾಜ್ಯ ಸರ್ಕಾರ ಇದಕ್ಕೆ ತಕ್ಕ ಪ್ರತಿಫಲ ಅನುಭವಿಸಲಿದೆ ಎಂದು ಚೆನ್ನಿತ್ತಲ ತಿಳಿಸಿರುವರು.