ಸಮರಸ ಚಿತ್ರ ಸುದ್ದಿ: ಕಾಸರಗೋಡು: ನಗರಸಭೆ ವ್ಯಾಪ್ತಿಯ ಕೊಪ್ಪಳದಲ್ಲಿ 53ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕಾಲ್ನಡೆ ಸೇತುವೆ ಪೂರ್ಣಗೊಳ್ಳುವುದರೊಂದಿಗೆ ಈ ಪ್ರದೇಶದ ಜನತೆಯ ದೀರ್ಘ ಕಾಲದ ಬೇಡಿಕೆಯೊಂದು ಈಡೇರಿದಂತಾಗಿದೆ. ಈ ಪ್ರದೇಶದಲ್ಲಿ ಎಸ್.ಸಿ, ಎಸ್.ಟಿ ಸಮುದಾಯದ ಜನತೆ ಹೆಚ್ಚಾಗಿ ವಾಸಿಸುತ್ತಿದ್ದು, ಮಳೆಗಾಲದಲ್ಲಿ ಈ ಪ್ರದೇಶದ ಜನತೆ ದ್ವೀಪಸದೃಶ ಜೀವನ ನಡೆಸುತ್ತಿರುವುದನ್ನು ಮನಗಂಡು ನಗರಸಭೆಯ ಹಿಂದುಳಿದ ಸಮುದಾಯದ ಅಭಿವೃದ್ಧಿ ಇಲಾಖೆ ಸಹಕಾರದೊಂದಿಗೆ ಕಾಲ್ನಡೆ ಸೇತುವೆ ನಿರ್ಮಿಸಲಾಗಿದೆ.