HEALTH TIPS

ಎಡರಂಗ ಸರ್ಕಾರದ ಪತನ ಸನ್ನಿಹಿತ-ಎ.ಪಿ ಅಬ್ದುಲ್ಲಕುಟ್ಟಿ



             ಕಾಸರಗೋಡು:ಸಿಪಿಎಂ ಕೇರಳ ಘಟಕ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೊಡಿಯೇರಿ ಬಾಲಕೃಷ್ಣನ್ ಅವರಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೂ ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕಾದ ಅನಿವಾರ್ಯತೆ ಬಂದೊದಗಲಿರುವುದಾಗಿ ಬಿಜೆಪಿ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷ ಎ.ಪಿ ಅಬ್ದುಲ್ಲ ಕುಟ್ಟಿ ತಿಳಿಸಿದ್ದಾರೆ.

        ಸ್ಥಳೀಯಾಡಳಿತ ಸಂಸ್ಥೆ ಚುನಾವಣೇ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಪರ್ಯಟನೆ ನಡೆಸಿದ ಅವರು ಉದುಮ ಪಂಚಾಯಿತಿ ಬಾರದಲ್ಲಿ ಚುನಾವಣಾ ಪ್ರಚಾರಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು.

          ಕೇರಳದ ಮಾರ್ಕಿಸ್ಟ್-ಕಮ್ಯೂನಿಸ್ಟ್ ಪಾರ್ಟಿ ಪಿಣರಾಯಿ ವಿಜಯನ್ ಅವರೊಂದಿಗೆ ಅಂತ್ಯವಾಗಲಿದೆ. ಎಡರಂಗ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಲ್ಪಸಂಖ್ಯಾತರಲ್ಲಿ ಭಯದ ವಾತಾವರಣ ಮೂಡಿಸಿ ಬಿಜೆಪಿಯನ್ನು ದೂರವಿರಿಸುವ ಸಿಪಿಎಂನ ತಂತ್ರ ಫಲಿಸದು. ಕೇರಳದ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯಲ್ಲಿ  ಬಿಜೆಪಿ  ಅತಿಹೆಚ್ಚಿನ ಸಥಾನಗಳನ್ನು ಗೆಲ್ಲುವುದು ಶತ:ಸಿದ್ಧ ಎಂದು ತಿಳಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries