HEALTH TIPS

ಅಕ್ರಮ ಮೀನುಗಾರಿಕಾ ದೋಣಿಗಳ ನಿಯಂತ್ರಣಕ್ಕೆ ಬಿಗುಗೊಂಡ ಗಸ್ತು

       ಕಾಸರಗೋಡು: ಕೇರಳ ವ್ಯಾಪ್ತಿಯ ಕಡಲ ತೀರಪ್ರದೇಶಗಳನ್ನು ಕೇಂದ್ರೀಕರಿಸಿ ಅನ್ಯ ಪ್ರದೇಶಗಳ ಮಾಫಿಯಾಗಳು ಹಲವು ವರ್ಷಗಳಿಂದ ನಡೆಸುತ್ತಿರುವ ಅವ್ಯವಹಾರಗಳು ಈಗ ಬಯಲಾಗುತ್ತಿದೆ. ಮಂಗಳೂರಿನ ಅನಧಿಕೃತ ಮೀನುಗಾರಿಕಾ ಮಾಫಿಯಾಗಳು ಕೇರಳ ವ್ಯಾಪ್ತಿಗೆ ಅತಿಕ್ರಮಣಗೈದು ಇದೀಗ ಭೀತಿಯ ವಾತಾವರಣ ಸೃಷ್ಟಿಯಾಗಿರುವುದರಿಂದ ಅಧಿಕೃತರು ಎಚ್ಚೆತ್ತುಕೊಂಡಿದ್ದಾರೆ. ಕಳೆದ ಸೋಮವಾರ ಶಿರಿಯಾ ಕರಾವಳಿ ಪೋಲೀಸರು ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ದೋಣಿಯೊಂದನ್ನು ವಶಕ್ಕೆ ಪಡೆದಿದ್ದರು. ವಶಪಡಿಸಿದ ದೋಣಿಯನ್ನು ದಡಕ್ಕೆ ಕೊಂಡೊಯ್ಯುವಂತೆ ನಿರ್ದೇಶನ ನೀಡಿದ್ದರೂ ಮಾಫಿಯಾ ತಂಡ ಪೋಲೀಸರೊಂದಿಗೆ ಮಂಗಳೂರಿಗೆ ಪಲಾಯನಗೈದಿದ್ದು, ಬಳಿಕ ಜಿಲ್ಲಾ ಪೋಲೀಸ್ ವರಿಷ್ಠರು ಮಧ್ಯ ಪ್ರವೇಶಿಸಿ ಮಂಗಳೂರು ಪೋಲೀಸರ ನೆರವಿನೊಂದಿಗೆ ಕೇರಳ ಕರಾವಳಿ ಪೋಲೀಸರನ್ನು ಮಾಫಿಯಾಗಳ ಕೈಯಿಂದ ರಕ್ಷಿಸಿ ಕರೆತರಲಾಗಿತ್ತು. ಆ ಬಳಿಕ ಇದೀಗ ಕೇರಳ ಕರಾವಳಿ ಪೋಲೀಸ್ ತಂಡ ಸಮುದ್ರದಲ್ಲಿ ನಡೆಯುತ್ತಿರುವ ಮಾಫಿಯಾಗಳನ್ನು ಮಟ್ಟ ಹಾಕಲು ತೀವ್ರ ಗಸ್ತನ್ನು ಚುರುಕುಗೊಳಿಸಿದ್ದಾರೆ. 

      ಕೇರಳದಲ್ಲಿ ನಿಷೇಧಿಸಲಾದ ಲೈಟ್ ಬಲ್ಬ್ ಬಳಸಿ ಅಕ್ರಮ ಮೀನುಗಾರಿಕೆ ನಡೆಸುತ್ತಿದ್ದ ದೋಣಿ ಮತ್ತು ಅದರಲ್ಲಿದ್ದ 12 ಮಂದಿ ಸಿಬ್ಬಂದಿಗಳ ವಿರುದ್ದ ಪೋಲೀಸರನ್ನು ಆಕ್ರಮಿಸಿದ ಪ್ರಕರಣವೂ ಒಳಗೊಂಡಂತೆ ದೂರು ದಾಖಲಿಸಿ ಬಂಧಿಸಲಾಗಿದೆ. 

        ಕೇರಳ ಪೋಲೀಸರ ಅಪಹರಣಕ್ಕೆ ಸಂಬಂಧಿಸಿದಂತೆ ದೋಣಿ ಮಾಲೀಕರು ಮತ್ತು ಕಾರ್ಮಿಕರು ಸೇರಿದಂತೆ 12 ಜನರ ವಿರುದ್ಧ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ. ಕೋಸ್ಟ್ ಗಾರ್ಡ್ ಕರ್ನಾಟಕ ಮತ್ತು ತಮಿಳುನಾಡು ನಿವಾಸಿಗಳ ವಿರುದ್ಧ ಜಾಮೀನು ರಹಿತ ಪ್ರಕರಣದ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಶಿರಿಯ ಕೋಸ್ಟ್ ಗಾರ್ಡ್ ಸೋಮವಾರ ಮಧ್ಯಾಹ್ನ ಸಮುದ್ರದಲ್ಲಿ ಗಸ್ತು ತಿರುಗಿತ್ತು. ಎಸ್‍ಐ ಕೆವಿ ರಾಜಕುಮಾರ್ ನೇತೃತ್ವದ ತಂಡವು ಸಮುದ್ರದಲ್ಲಿ ಅಕ್ರಮ ದೋಣಿ ವಶಪಡಿಸಿಕೊಂಡಿತು. ಹೆಚ್ಚಿನ ಪರಿಶೀಲನೆಗಾಗಿ ಅವರನ್ನು ಬಂದರಿಗೆ ಕರೆತರಲು ತಿಳಿಸಲಾಯಿತು. ಕೇರಳದ ಪೋಲೀಸರನ್ನು ಅದೇ ದೋಣಿಯಲ್ಲಿ ಕಳುಹಿಸಿ ಕಾಸರಗೋಡು ಬಂದರಿನಲ್ಲಿ ಇಳಿಸಬೇಕು ಎಂಬ ಸೂಚನೆ ಇತ್ತು. ಆದರೆ ಕಾಸರಗೋಡು ಬಂದರಿಗೆ ಹೋಗುವ ಬದಲು ಅವರನ್ನು ಮಂಗಳೂರು ಬಂದರಿಗೆ ಅಪಹರಿಸಲಾಗಿತ್ತು.  ಈ ಗುಂಪು ಶಿರಿಯಾ ಕರಾವಳಿ ಪೋಲೀಸರ ಇಬ್ಬರು ನಾಗರಿಕ ಪೋಲೀಸ್ ಅಧಿಕಾರಿಗಳಾದ ರಘುನಾಥ್ ಮತ್ತು ಸುಬೀಶ್ ಅವರನ್ನು ಅಪಹರಿಸಿತ್ತು.

             ನಿಷೇಧಿತ ಬಲ್ಬ್ ಬಳಸಿ ಮೀನುಗಾರಿಕೆ: 

    ಪೋಲೀಸ್ ಇದೀಗ ಗಸ್ತು ತೀವ್ರಗೊಳಿಸುತ್ತಿರುವಂತೆ ಕೇರಳದಲ್ಲಿ ನಿಷೇಧಿತ ಬೆಳಕಿನ ಬಲ್ಬ್‍ಗಳನ್ನು ಹೊತ್ತೊಯ್ಯುತ್ತಿದ್ದ ಮತ್ತೊಂದು ದೋಣಿಯನ್ನು ಪತ್ತೆಹಚ್ಚಲಾಗಿದೆ.  ತೈಕಡಪ್ಪುರಂ ಮೀನುಗಾರಿಕೆ ಇಲಾಖೆ ಮತ್ತು ತ್ರಿಕ್ಕರಿಪುರ, ಬೇಕಲ್ ಮತ್ತು ಕುಂಬಳೆ ಕರಾವಳಿ ಪೋಲೀಸರು ಮಂಗಳವಾರ ರಾತ್ರಿ ಜಂಟಿ ಗಸ್ತು ತಿರುಗುತ್ತಿದ್ದಾಗ ದೋಣಿಯನ್ನು ಪತ್ತೆಹಚ್ಚಿ ವಶಪಡಿಸಲಾಯಿತು.  ರಾತ್ರಿ 11 ಗಂಟೆಗೆ ಮಂಗಳೂರು ಮೂಲದ ಸಕೀರ್ ಎಂಬವನ ಒಡೆತನದ ರಿಫಿ ಕಿಂಗ್ ಎಂಬ ದೋಣಿಯನ್ನು ತೈಕಡಪ್ಪುರಂ ನಲ್ಲಿ ಕಾಸರಗೋಡು ಜಿಲ್ಲಾ ಮೀನುಗಾರಿಕಾ ಸಹಾಯಕ ನಿರ್ದೇಶಕ ಸುರೇಂದ್ರನ್ ನೇತೃತ್ವದ ಚೀಫ್ ಕೋಸ್ಟಲ್ ಎಸ್.ಐ. ರಾಜೀವ್ ಮತ್ತು ತಂಡ ಪತ್ತೆಹಚ್ಚಿ ಬಂಧಿಸಿದೆ. 

          ಕಠಿಣ ಕ್ರಮ:

   ವಶಪಡಿಸಿಕೊಂಡ ದೋಣಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಅಂತಹ ಮೀನುಗಾರಿಕೆ ವಿರುದ್ಧ ಗಸ್ತು ಬಿಗಿಗೊಳಿಸಲಾಗುವುದೆಂದು ಜಿಲ್ಲಾ ಮೀನುಗಾರಿಕೆ ಉಪನಿರ್ದೇಶಕ ಪಿ.ವಿ.ಸತೀಶನ್ ತಿಳಿಸಿದ್ದಾರೆ. ಕರಾವಳಿ ಎಎಸ್‍ಐಗಳಾದ ಎಂ.ಟಿ.ಪಿ ಸೈಫುದ್ದೀನ್, ಸಂತೋಷ್ ಮತ್ತು ಉಣ್ಣಿಕೃಷ್ಣನ್, ಮೂರು ಕರಾವಳಿ ನಿಲ್ದಾಣಗಳ ನಾಲ್ವರು ನಾಗರಿಕ ಪೋಲೀಸ್ ಅಧಿಕಾರಿಗಳು, ಕರಾವಳಿ ಮೀನುಗಾರಿಕೆ ಪಾರುಗಾಣಿಕಾ ದೋಣಿ ಸಿಬ್ಬಂದಿ ಕೂಡ ಗಸ್ತು ತಂಡದಲ್ಲಿದ್ದಾರೆ.  ಏತನ್ಮಧ್ಯೆ, ಕೋಸ್ಟ್ ಗಾರ್ಡ್ ದೋಣಿಯೊಂದು ಸಮುದ್ರದಲ್ಲಿ ಪತನಗೊಂಡಿದ್ದು ಬುಧವಾರ ಬೆಳಿಗ್ಗೆ ಬೇರೊಂದು ದೋಣಿಯ ಮೂಲಕ ದಡಕ್ಕೆ ಎಳೆದು ತರಲಾಯಿತು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries