ಮಂಜೇಶ್ವರ: ನವೀಕರಣಗೊಂಡ ಮೀಯಪದವು ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಪ್ರವೇಶ ಮತ್ತು ಸ್ವರ್ಣಲೇಪಿತ ರಜತ ಚಿತ್ರ ಫಲಕ ಪ್ರತಿಷ್ಠಾ ಮಹೋತ್ಸವವು ಫೆಬ್ರವರಿ 13ರಿಂದ 16ರವರೆಗೆ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
13ರರಂದು ಬೆಳಿಗ್ಗೆ 8ಕ್ಕೆ ಗಣಪತಿ ಹೋಮ, 10ಕ್ಕೆ ಉಗ್ರಾಣ ಮುಹೂರ್ತ, 10.30ರಿಂದ ಮಧೂಕ ಉತ್ಪತ್ತಿ ಶಾಂತಿ, 12.30ಕ್ಕೆ ಮಹಾ ಪೂಜೆ 1ರಿಂದ ಪ್ರಸಾದ ಭೋಜನ, ಅಪರಾಹ್ನ 3ರಿಂದ ಚಿಗುರುಪಾದೆ ದೇವಸ್ಥಾನದಿಂದ ಶ್ರೀ ಕ್ಷೇತ್ರಕ್ಕೆ ಹೊರೆಕಾಣಿಕೆ ಮೆರವಣಿಗೆ, ಸಂಜೆ 5ರಿಂದ ಸಭಾ ಕಾರ್ಯಕ್ರಮ ಜರಗಲಿದ್ದು ಶ್ರೀ ಮತ್ ಎಡನೀರು ಮಠದ ಪರಮ ಪೂಜ್ಯ ಶ್ರೀ ಸಚ್ಚಿದಾನಂದ ಭಾರತಿ ಪಾದಂಗಳವರು ಆಶೀರ್ವಚನ ನೀಡಲಿದ್ದಾರೆ. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಂಜಿತ್ ಪಿ ಅಧ್ಯಕ್ಷತೆ ವಹಿಸುವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸೇವಾ ಪ್ರಮುಖ ಯನ್.ಪಿ.ಸುಬ್ರಾಯ ನಂದೋಡಿ ಧಾರ್ಮಿಕ ಭಾಷಣ ಗೈಯ್ಯುವರು. ವೇದಮೂರ್ತಿ ರಾಮ ಭಟ್ ಬೋಳಂತಕೋಡಿ ಗೌರವ ಉಪಸ್ಥಿತಿ ಇರಲಿದ್ದು, ದಾಸಣ್ಣ ಆಳ್ವ ಕುಳೂರುಬೀಡು, ಚಂದ್ರಶೇಖರ ಜ್ಯೋತಿಷಿ ಮೀಯಪದವು, ಶಂಕರನಾರಾಯಣ ಭಟ್ ಕೋಡಿಯಡ್ಕ, ಸಂಜೀವ ಶೆಟ್ಟಿ ಕುಂಜತ್ತೂರು ಮಾಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಫೆಬ್ರವರಿ 14ರಂದು ಬೆಳಿಗ್ಗೆ 10ರಿಂದ ಭಜನೆ, 12ಕ್ಕೆ ಮಹಾಪೂಜೆ, 1ಗಂಟೆಗೆ ಪ್ರಸಾದ ಭೋಜನ, 3ಗಂಟೆಗೆ ಆಚಾರ್ಯವರಣ, 3.30ರಿಂದ ಶಿಲ್ಪಿಗಳಿಂದ ಭಜನಾ ಮಂದಿರ ಸ್ವೀಕಾರ, 4.30ರಿಂದ ಪ್ರಾಸಾದ ಶುದ್ದಿ, ಪುಣ್ಯಾಹ ವಾಚನ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತುಪೂಜೆ, ಪ್ರಾಕಾರ ಬಲಿ, ಕಲಶ ಪ್ರತಿಷ್ಠೆ, ಜರಗಲಿದೆ.
ಪೆಬ್ರವರಿ 15ರಂದು ಬೆಳಿಗ್ಗೆ 8.29ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾಮಂದಿರದ ಪ್ರವೇಶ ಮತ್ತು ಸ್ವರ್ಣಲೇಪಿತ ರಜತ ಚಿತ್ರ ಫಲಕ ಪ್ರತಿಷ್ಠಾ ಮಹೋತ್ಸವವು ಜರಗಲಿದೆ. ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಮಾಣಿಲ ಶ್ರೀಧಾಮದ ಶ್ರೀ ಯೋಗಿಕೌಸ್ತುಭ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕನ್ಯಾನ ಅಧ್ಯಕ್ಷತೆ ವಹಿಸುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಧಾರ್ಮಿಕ ಭಾಷಣ ನೀಡುವರು. ಮುಖ್ಯ ಅತಿಥಿಗಳಾಗಿ ಕುಸುಮೋದರ ಶೆಟ್ಟಿ ದಡ್ಡಂಗಡಿ ಚೆಲ್ಲಡ್ಕ, ಚೇತನ ಎಂ.ಯೋಜನಾಧಿಕಾರಿಗಳು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಜಿಲ್ಲೆ, ಭಾಗವಹಿಸುವರು. ಗುರುಸ್ವಾಮಿ ಗೋವಿಂದನ್ ನಾಯರ್ ಕಾಞಂಗಾಡು, ಹಾಗೂ ರಮೇಶ ಕಾರಂತ ಬೆದ್ರಡ್ಕ ಶಿಲ್ಪಿಗಳು ಇವರನ್ನು ಸನ್ಮಾನಿಸಲಾಗುವುದು. 12ಗಂಟೆಗೆ ಮಹಾಪೂಜೆ, ಪ್ರಾರ್ಥನೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ ಹಾಗೂ ಪ್ರಸಾದ ಭೋಜನ ಜರಗಲಿದ್ದು, ಅಪರಾಹ್ನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಕರ್ಣಾರ್ಜುನ ತಾಳಮದ್ದಳೆ ಜರಗಲಿದೆ. ಸಂಜೆ 6.35ರಿಂದ ಭಜನಾ ಕಾರ್ಯಕ್ರಮ ಜರಗಲಿದೆ.
ಫೆಬ್ರವರಿ 16ರಂದು ಬೆಳಿಗ್ಗೆ 8ರಿಂದ ವಿಷ್ಣು ಸಹಸ್ರನಾಮ ಯಾಗ 11ಗಂಟೆಗೆ ಪೂರ್ಣಾಹುತಿ, 11.30ರಿಂದ ಸಭಾಕಾರ್ಯಕ್ರಮ, ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಧಾರ್ಮಿಕ ಭಾಷಣ ಗೈಯ್ಯುವರು ಎಂದು ಮಂದಿರ ಪ್ರಕಟಣೆ ತಿಳಿಸಿದೆ.