HEALTH TIPS

BREAKING-ಮಣಿದ ಪಿಣರಾಯಿ:ತಾತ್ಕಾಲಿಕ ನೌಕರರನ್ನು ಖಾಯಂಗೊಳಿಸುವುದಕ್ಕೆ ರಾಜ್ಯ ಸರ್ಕಾರದಿಂದ ಬ್ರೇಕ್- ಕ್ಯಾಬಿನೆಟ್ ನಿರ್ಧಾರ!

Top Post Ad

Click to join Samarasasudhi Official Whatsapp Group

Qries


       ತಿರುವನಂತಪುರ: ಪ್ರತಿಪಕ್ಷಗಳ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ರಾಜ್ಯ ಸರ್ಕಾರ ತಾತ್ಕಾಲಿಕ ನೌಕರರನ್ನು ಖಾಯಂಗೊಳಿಸುವ ಪ್ರಕ್ರಿಯೆಗೆ ಬ್ರೇಕ್ ನೀಡಿದೆ. ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.


ಖಾಯಂಗೊಳಿಸುವಿಕೆ ಪಾರದರ್ಶಕವಾಗಿದ್ದರೂ, ಪ್ರತಿಪಕ್ಷಗಳು ಅಭ್ಯರ್ಥಿಗಳನ್ನು ದಾರಿ ತಪ್ಪಿಸುತ್ತಿವೆ ಎಂದು ಸರ್ಕಾರ ವಿವರಿಸಿದೆ. ಆರೋಗ್ಯ ಮತ್ತು ಕಂದಾಯ ಇಲಾಖೆಗಳಲ್ಲಿ ಹೆಚ್ಚಿನ ಹುದ್ದೆಗಳನ್ನು ರಚಿಸಲು ಕ್ಯಾಬಿನೆಟ್ ನಿರ್ಧರಿಸಿದೆ.
        ಚುನಾವಣೆಯ ಹಿನ್ನೆಲೆಯಲ್ಲಿರುತ್ತ ವಿವಾದಗಳು ಕುದಿಯದಂತೆ ಸರ್ಕಾರ ಜಾಗೃತಗೊಂಡಿದ್ದು, ತುರ್ತು ನಿರ್ಧಾರ ಹೊರಬೀಳಲು ಕಾರಣವಾಯಿತು. ಕಳೆದ ವಿವಿಧ ಕ್ಯಾಬಿನೆಟ್ ಸಭೆಗಳಲ್ಲಿ ಸರ್ಕಾರ ಸಾವಿರಕ್ಕೂ ಹೆಚ್ಚು ಶಾಶ್ವತ ನೇಮಕಾತಿಗಳನ್ನು ಮಾಡಿದೆ. ಸರ್ಕಾರದ ಮುಂದೆ ಹಲವು ಶಿಫಾರಸುಗಳಿವೆ. ಏತನ್ಮಧ್ಯೆ, ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಹೊರ  ನಿರ್ಧಾರವನ್ನು ಕ್ಯೆಗೊಳ್ಳಲಾಯಿತು.
        ಇಲ್ಲಿಯವರೆಗೆ ಮಾಡಿದ ನೇಮಕಾತಿಗಳಿಗೆ ಯಾವುದೇ ಬದಲಾವಣೆ ಇರುವುದಿಲ್ಲ. ಆರೋಗ್ಯ ಮತ್ತು ಕಂದಾಯ ಇಲಾಖೆಗಳಲ್ಲಿರುವವರು ಸೇರಿದಂತೆ ಸುಮಾರು 150 ಜನರನ್ನು ಖಾಯಂಗೊಳಿಸುವ ಕಾರ್ಯಸೂಚಿ ಇಂದು ಸಂಪುಟದ ಮುಂದೆ ಇತ್ತು. ಈ ಯಾವುದನ್ನೂ ಸಭೆ ಪರಿಗಣಿಸಿಲ್ಲ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries