HEALTH TIPS

ರಾಜ್ಯದಲ್ಲಿ ಇಂದು 2078 ಮಂದಿಗೆ ಕೊರೊನಾ ಸೋಂಕು: ಕಾಸರಗೋಡು:119 ಮಂದಿಗೆ ಸೋಂಕು ಪತ್ತೆ

Top Post Ad

Click to join Samarasasudhi Official Whatsapp Group

Qries

                             

        ತಿರುವನಂತಪುರ: ರಾಜ್ಯದಲ್ಲಿ ಇಂದು 2078 ಮಂದಿ ಜನರಿಗೆ ಕೋವಿಡ್ -19 ಖಚಿತಪಡಿಸಲಾಗಿದೆ. ಕೋಝಿಕೋಡ್ 321, ಎರ್ನಾಕುಳಂ 228, ತಿರುವನಂತಪುರ 200, ಕೊಲ್ಲಂ 169, ತ್ರಿಶೂರ್ 166, ಕೊಟ್ಟಾಯಂ 164, ಕಣ್ಣೂರು 159, ಮಲಪ್ಪುರಂ 146, ಇಡುಕ್ಕಿ 126, ಕಾಸರಗೋಡು 119, ಅಲಪ್ಪುಳ 105, ಪಾಲಕ್ಕಾಡ್  68 ಮತ್ತು ಪತ್ತನಂತಿಟ್ಟು 62, ವಯನಾಡ್ 45 ಎಂಬಂತೆ ಸೋಂಕು ದೃಢಪಡಿಸಲಾಗಿದೆ.


 

              ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ನಿಂದ ಆಗಮಿಸಿದ ಯಾರಿಗೂ ಕೋವಿಡ್ -19 ಖಚಿತಪಡಿಸಿಲ್ಲ. ಯುಕೆ (102), ದಕ್ಷಿಣ ಆಫ್ರಿಕಾ (4) ಮತ್ತು ಬ್ರೆಜಿಲ್ (1) ಎಂಬಂತೆ ಈವರೆಗೆ ಒಟ್ಟು 107 ಮಂದಿ ಜನರಿಗೆ ಸೋಂಕು ದೃಢಪಡಿಸಲಾಗಿದ್ದು, ಈ ಪೈಕಿ 101 ಮಂದಿಗೆ ನಕಾರಾತ್ಮಕವಾಗಿದೆ. ಒಟ್ಟು 11 ಮಂದಿ ಜನರಿಗೆ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.

           ಕಳೆದ 24 ಗಂಟೆಗಳಲ್ಲಿ 58,777 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ.3.54 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್ ಎಂ ಎಂ ವಿ  ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,26,17,046 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

             ಕಳೆದ 24 ಗಂಟೆಗಳಲ್ಲಿ  15 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 4482 ಕ್ಕೆ ಏರಿಕೆಯಾಗಿದೆ.

         ಇಂದು, ಸೋಂಕು ಪತ್ತೆಯಾದವರಲ್ಲಿ 102 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 1860 ಮಂದಿ ಜನರಿಗೆ ಸೋಂಕು ತಗಲಿತು. 111 ಮಂದಿ ಜನರ ಸಂಪರ್ಕ ಮೂಲಗಳು ಸ್ಪಷ್ಟವಾಗಿಲ್ಲ. ಕೋಝಿಕೋಡ್ 302, ಎರ್ನಾಕುಳಂ 219, ತಿರುವನಂತಪುರ 149, ಕೊಲ್ಲಂ 166, ತ್ರಿಶೂರ್ 160, ಕೊಟ್ಟಾಯಂ 158, ಕಣ್ಣೂರು 124, ಮಲಪ್ಪುರಂ 142, ಇಡುಕಿ 120, ಕಾಸರಗೋಡು 107, ಆಲಪ್ಪುಳ 90, ಪಾಲಕ್ಕಾಡ್ 29, ಪತ್ತನಂತಿಟ್ಟು 54, ವಯನಾಡ್ 40 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ. 

          ಐವರು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ. ತಿರುವನಂತಪುರ 2, ತ್ರಿಶೂರ್, ಕೋಝಿಕೋಡ್ ಮತ್ತು ಕಾಸರಗೋಡು ತಲಾ 1 ಎಂಬಂತೆ ಸೋಂಕು ದೃಢಪಟ್ಟಿದೆ. 

         ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 2211 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 185, ಕೊಲ್ಲಂ 140, ಪತ್ತನಂತಿಟ್ಟು 71, ಆಲಪ್ಪುಳ 242, ಕೊಟ್ಟಾಯಂ 358, ಇಡುಕ್ಕಿ 24, ಎರ್ನಾಕುಳಂ 128, ತ್ರಿಶೂರ್ 248, ಪಾಲಕ್ಕಾಡ್ 76, ಮಲಪ್ಪುರಂ 221, ಕೋಝಿಕೋಡ್ 255, ವಯನಾಡ್ 43, ಕಣ್ಣೂರು 112, ಕಾಸರಗೋಡು 18 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 25,009 ಮಂದಿ ಜನರಿಗೆ ಸೋ|ಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 10,72,554 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

       ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,30,019 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,26,255 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 3764 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಒಟ್ಟು 427 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

       ಇಂದು 3 ಹೊಸ ಹಾಟ್‍ಸ್ಪಾಟ್‍ಗಳಿವೆ. 11 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 351 ಹಾಟ್‍ಸ್ಪಾಟ್‍ಗಳಿವೆ. 


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries