ಅಯೋಧ್ಯೆ : ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆಯಾಗಿ ಸಂಗ್ರಹಿಸಿದ್ದ 15,000 ಚೆಕ್ಗಳು ಬೌನ್ಸ್ ಆಗಿವೆ. ಇದರ ಒಟ್ಟು ಮೌಲ್ಯ 22 ಕೋಟಿ ರೂಪಾಯಿ ಎಂಬ ಅಂಶ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಆಡಿಟ್ ವರದಿಯಲ್ಲಿ ಬಹಿರಂಗವಾಗಿದೆ. ಬಹುತೇಕ ಚೆಕ್ಗಳು ಖಾತೆಯಲ್ಲಿ ಕಡಿಮೆ ಮೊತ್ತ ಇದ್ದ ಕಾರಣ ಬೌನ್ಸ್ ಆಗಿದ್ದವು. ಇನ್ನು ಉಳಿದವು ತಾಂತ್ರಿಕ ದೋಷದ ಕಾರಣ ಬೌನ್ಸ್ ಆಗಿವೆ.
ಚೆಕ್ ನೀಡಿದವರನ್ನು ಸಂರ್ಪಸಿ ಮತ್ತೊಮ್ಮೆ ಚೆಕ್ ನೀಡಿ ದೇಣಿಗೆ ಪಾವತಿಸುವಂತೆ ಬ್ಯಾಂಕುಗಳು ಹೇಳತೊಡಗಿವೆ. ಈ ಕೆಲಸ ಪ್ರಗತಿಯಲ್ಲಿದೆ ಎಂದು ಟ್ರಸ್ಟ್ನ ಸದಸ್ಯ ಡಾ.ಅನಿಲ್ ಮಿಶ್ರಾ ತಿಳಿಸಿದ್ದಾರೆ. ಬೌನ್ಸ್ ಆದ ಚೆಕ್ಗಳ ಪೈಕಿ 2,000ದಷ್ಟು ಚೆಕ್ಗಳು ಅಯೋಧ್ಯೆಯಿಂದಲೇ ಸಂಗ್ರಹಿಸಿದ್ದಾಗಿದೆ. ವಿಶ್ವ ಹಿಂದು ಪರಿಷದ್ (ವಿಹಿಂಪ) ಜನವರಿ 15ರಿಂದ ಫೆಬ್ರವರಿ 17ರ ತನಕ ದೇಣಿಗೆ ಸಮರ್ಪಣೆ ಕಾರ್ಯ ನಡೆಸಿತ್ತು. ಅಂದಾಜು 5,000 ಕೋಟಿ ರೂಪಾಯಿಯನ್ನು ಈ ಅಭಿಯಾನದಲ್ಲಿ ಸಂಗ್ರಹಿಸಲಾಗಿದೆ. ಅಂತಿಮ ಲೆಕ್ಕಾಚಾರ ಇನ್ನೂ ಬಹಿರಂಗವಾಗಿಲ್ಲ.