HEALTH TIPS

ಮತದಾನದ ದಿನದಂದು ತಮಿಳುನಾಡು ಗಡಿ ಮುಚ್ಚುವಂತೆ ಚುನಾವಣಾ ಆಯೋಗ ಸೂಚನೆ: ಗಡಿಯಲ್ಲಿ ಕೇಂದ್ರ ಸೈನ್ಯವನ್ನು ನಿಯೋಜಿಸಲಾಗುವುದು

Top Post Ad

Click to join Samarasasudhi Official Whatsapp Group

Qries

      

         ಕೊಚ್ಚಿ: ಮತದಾನದ ದಿನ ತಮಿಳುನಾಡಿನ ಗಡಿಯನ್ನು ಮುಚ್ಚಲಾಗುವುದು ಚುನಾವಣಾ ಆಯೋಗ ಹೈಕೋರ್ಟ್‍ಗೆ ಮಾಹಿತಿ ನೀಡಿದೆ. ಗಡಿಯಲ್ಲಿ ಕೇಂದ್ರ ಸೈನ್ಯವನ್ನು ನಿಯೋಜಿಸಲಾಗುವುದು. ಚುನಾವಣಾ ದಿನದಂದು ತಮಿಳುನಾಡು ಮತ್ತು ಕೇರಳದಲ್ಲಿ ಮತದಾರರು ಗಡಿಗಳನ್ನು ದಾಟಿ ಮತದಾನ ಮಾಡಲು ಆಗಮಿಸುವುದನ್ನು ತಡೆಯಲು ಉಡುಂಬನ್ ಚೋಳ, ದೇವಿಕುಳಂ, ಪೀರಮೇಡ್ ಮಂಡಲಗಳ ಯುಡಿಎಫ್ ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ ಆಯೋಗ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. 

       ಎರಡೆರಡು ಮತದಾನವನ್ನು ತಡೆಗಟ್ಟಲು ಭದ್ರತಾ ಪಡೆಗಳು ಗಡಿಯನ್ನು ಮುಚ್ಚಲಿವೆ. ಈ ಬಗ್ಗೆ ನಿಯಂತ್ರಣ ಹೇರಲು ು ಫಿರ್ಯಾದಿದಾರೆ ಶಾನಿಮೋಳ್ ಉಸ್ಮಾನ್ ಕೋರಿದ್ದರು.  ಮೋಸದ ಮತದಾನವನ್ನು ತಡೆಯಲು ಆಯೋಗವು ಕಠಿಣ ನಿರ್ದೇಶನ ನೀಡಬೇಕು.ಅಲ್ಲದೆ ವೀಡಿಯೋ ಚಿತ್ರೀಕರಣದ ಮೂಲಕವೂ ಪರ್ಯಾಯ ಮಾರ್ಗವಿದೆಯೇ ಎಂದು ಪರಿಶೀಲಿಸಲು ನ್ಯಾಯಾಲಯ ಆಯೋಗಕ್ಕೆ ತಿಳಿಸಿದೆ.   

     ಕೆಲವು  ಬೂತ್ ಗಳಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗುವುದೆಂದು  ಆಯೋಗ ಹೇಳಿದೆ. ಆದಾಗ್ಯೂ, 39 ಬೂತ್‍ಗಳಲ್ಲಿ, ಎರಡು ಮತಗಳನ್ನು ಹೊಂದಿರುವ ಜನರಿದ್ದಾರೆ. ಯುಡಿಎಫ್ ಅಭ್ಯರ್ಥಿಯ ಬೇಡಿಕೆಯಂತೆ ಎಲ್ಲಾ ಬೂತ್ ಗಳ ವೀಡಿಯೊಗಳನ್ನು ಚಿತ್ರೀಕರಿಸಬೇಕು ಎಂದಿದ್ದು, ಆದರೆ ಎಲ್ಲೆಡೆ ಇದು ಸುಲಭ ಸಾಧ್ಯವಲ್ಲ ಎಂದು ಆಯೋಗ ತಿಳಿಸಿದೆ. ಆಯೋಗಕ್ಕೆ ಅಸಾಧ್ಯವಾದಲ್ಲಿ ಸ್ವತಃ ಅಭ್ಯರ್ಥಿಗಳೇ ಚಿತ್ರೀಕರಣ ನಡೆಸುವರು ಎಂದು ಶಾನಿ ಮೋಲ್ ಉಸ್ಮಾನ್ ಹೇಳಿದ್ದಾರೆ. 


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries