HEALTH TIPS

ರಾಜ್ಯದಲ್ಲಿ ಉಚಿತ ಆಹಾರ ಕಿಟ್‍ಗಳ ವಿತರಣೆ ಮುಂದುವರಿಸಲು ಸಿಎಂ ಸೂಚನೆ; ಮುಂದಿನ ವಾರ ಕಿಟ್ ವಿತರಣೆ: ಅತಿಥಿ ಕೆಲಸಗಾರರಿಗೂ ಕಿಟ್

Top Post Ad

Click to join Samarasasudhi Official Whatsapp Group

Qries

                          

                ತಿರುವನಂತಪುರ: ಕೋವಿಡ್ ವಿಸ್ತರಣೆ ಮತ್ತು ಲಾಕ್‍ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಉಚಿತ ಆಹಾರ ಕಿಟ್‍ಗಳ ವಿತರಣೆ ಈ ತಿಂಗಳು ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮುಂದಿನ ವಾರ ಕಿಟ್ ವಿತರಿಸಲಾಗುವುದು. ಅತಿಥಿ ಕೆಲಸಗಾರರಿಗೆ ಕಿಟ್ ವಿತರಿಸಲಾಗುವುದು. 18-45 ವರ್ಷ ವಯಸ್ಸಿನ ಮಕ್ಕಳಿಗೆ ಏಕಕಾಲದಲ್ಲಿ ಲಸಿಕೆ ನೀಡಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದರು.


         ಇತರ ಕಾಯಿಲೆ ಇರುವವರಿಗೆ ಆದ್ಯತೆ ನೀಡಲಾಗುವುದು. ಅನಾರೋಗ್ಯ ಪೀಡಿತರ ಮನೆಗಳಿಗೆ ತೆರಳುವ ವಾರ್ಡ್ ಮಟ್ಟದ ಸಮಿತಿ ಸದಸ್ಯರಿಗೆ ಮತ್ತು ಸಂಪರ್ಕತಡೆಯಲ್ಲಿರುವವರಿಗೆ ಆದ್ಯತೆ ನೀಡಲಾಗುವುದು ಎಂದು ಸಿಎಂ ಹೇಳಿದರು. ವಾರ್ಡ್ ಮಟ್ಟದ ಸಮಿತಿಯಲ್ಲಿರುವವರಿಗೆ ಪಾಸ್ ನೀಡಲಾಗುವುದು. ತುರ್ತು ಅಗತ್ಯಗಳಿಗಾಗಿ ಹೊರಗೆ ತೆರಳಬೇಕಾದವರು ಪೋಲೀಸರಿಂದ ಪಾಸ್ ಪಡೆಯಬೇಕು.

             ಕೇರಳದ ಹೊರಗಿನಿಂದ ಬರುವವರು ಕೋವಿಡ್ ಜಾಗ್ರತಾ ಪೆÇೀರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳಬೇಕು. ಹಾಗೆ ಮಾಡದವರು ತನ್ನ ಸ್ವಂತ ಖರ್ಚಿನಲ್ಲಿ 14 ದಿನಗಳ ಸಂಪರ್ಕತಡೆಯಲ್ಲಿ ಇರಬೇಕು. ಆರೋಗ್ಯ ಕಾರ್ಯಕರ್ತರ ಕೊರತೆಯ ಸಮಸ್ಯೆಯನ್ನು ಪರಿಹರಿಸಲು ಸ್ವಯಂಸೇವಕರಾಗಲು ಆಸಕ್ತಿ ಇರುವ ವಿದ್ಯಾರ್ಥಿಗಳು ಮತ್ತು ಇತರರಿಗೆ ತರಬೇತಿ ನೀಡುವುದಾಗಿ ಸಿಎಂ ಹೇಳಿದರು.  


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries