HEALTH TIPS

ಸಮರಸ: ಚಿಗುರು: ಪ್ರತಿಭೆ: ಪ್ರಣತಿ ಎನ್.ಪುದುಕೋಳಿ

Top Post Ad

Click to join Samarasasudhi Official Whatsapp Group

Qries

 ಬದಲಾದ ವರ್ತಮಾನದಲ್ಲಿ ವಿದ್ಯಾರ್ಥಿಗಳ ದೈನಂದಿನ ಬದುಕು ಅಂಕೆಮೀರಿ ಗೊಂದಲಗೊಳಗಾಗುತ್ತಿರುವುದು ಇತ್ತೀಚೆಗಿನ ವರದಿಗಳಿಂದ ತಿಳಿದುಬರುತ್ತಿದೆ. ಶಾಲಾ ಶಿಕ್ಷಣವೂ ಇಲ್ಲದೆ ಪುಟಾಣಿ ಮಕ್ಕಳು ಮನೆಯಲ್ಲೇ ದಿನ ಕಳೆಯುವುದು ಮಕ್ಕಳಿಗೂ, ಪೋಷಕರಿಗೂ ಸವಾಲಿನದ್ದೆ.

ಈ ಮಧ್ಯೆ ಹಲವೆಡೆ ಪುಟ್ಟ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ಸ್ವಯಂ ಪ್ರೇರಿತರಾಗಿ ತೊಡಗಿಸಿಕೊಂಡು ಹವ್ಯಾಸಗಳನ್ನು ರೂಢಿಸಿಕೊಳ್ಳುತ್ತಿರುವುದೂ ಹೌದು. ಪೋಷಕರ, ತಮ್ಮ ಸಹವರ್ತಿಗಳ ನೆರವಿನೊಂದಿಗೆ ಅನೇಕ ಮಕ್ಕಳು ವಿವಿಧ ಸಕಾರಾತ್ಮಕ ಚಟುವಟಿಕೆಗಳಲ್ಲಿ ವ್ಯಸ್ಥರಾಗಿ ಭರವಸೆ ಮೂಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನೀರ್ಚಾಲು ಸಮೀಪದ ಪುದುಕೋಳಿಯ ಉದಯ ಶಂಕರ ಭಟ್ ಶ್ರೀಮತಿ ಸೌಮ್ಯ ದಂಪತಿಗಳ ಸುಪುತ್ರಿ ಪ್ರಣತಿ ಎನ್ ತನ್ನದೇ ವಿಶಿಷ್ಟ ಹವ್ಯಾಸದ ಮೂಲಕ ಬೆರಗುಗೊಳಿಸಿದ್ದಾಳೆ. ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ೪ನೇ ತರಗತಿಯ ವಿದ್ಯಾರ್ಥಿನಿಯಾದ ಈ ಪುಟಾಣಿ ಪೋಷಕರ, ಸಹೋದರಿಯರ ಸಹಕಾರದೊಂದಿಗೆ ವಿವಿಧ ನಮೂನೆಯ ಕ್ರಾಪ್ಟ್ ರಚನೆಯ ಮೂಲಕ ಭರವಸೆ ಮೂಡಿಸಿದ್ದಾಳೆ. ಈಕೆಯ ಸಾಧನೆ ಗಮನಿಸಿ ಚಿಂಟು ಟಿವಿ ವಾಹಿನಿ ಕೂಡ|ಆ ಇತ್ತೀಚೆಗೆ ಇವಳದೊಂದು ಕಾರ್ಯಕ್ರಮವನ್ನೂ ಪ್ರಸ್ತುತಪಡಿಸಿತ್ತು.
           ವಿದ್ಯಾರ್ಥಿಗಳ, ಪುಟಾಣಿಗಳ ಸರ್ವತೋಮುಖ ಶ್ರೇಯಸ್ಸಿಗೆ ವಿವಿಧ ನಮೂನೆಯ ಪ್ರಯತ್ನಗಳು ನಿರಂತರವಾಗಿರಬೇಕು. ಶಾಲಾ ಶಿಕ್ಷಣವಿಂದು ಮರೀಚಿಕೆಯಾಗಿರುವ ಹೊಸತೊಂದು ಕಾಲಘಟ್ಟದಲ್ಲಿ ಸಾಗುತ್ತಿರುವ ನಮಗೆ ನಮ್ಮ ಭಾವೀ ಜನಾಂಗವನ್ನು ಸಮರ್ಥವಾಗಿ ಕಡೆದು ನಿಲ್ಲಿಸುವ ಹೊಣೆಗಾರಿಕೆ ಇದ್ದು, ಈ ನಿಟ್ಟಿನಲ್ಲಿ ಪ್ರಣತಿಯ ಈ ಸಾಧನೆ ಇತರರಿಗೂ ಪ್ರೇರಣೆಯಾಗಲೆಂದು ಸಮರಸ ಸುದ್ದಿ ಪುಟಾಣಿಯ ಪರಿಚಯಾತ್ಮಕ ಸಾಧನಾ ವಿವರಗಳನ್ನು ನೀಡುತ್ತಿದೆ.
                          ವೀಕ್ಷಿಸಿ, ಪ್ರೋತ್ಸಾಹಿಸಿ..ಇದು ಓದುಗರು ರೂಪಿಸಿದ ಗಡಿನಾಡಿನ ಏಕೈಕ ಪರಿಪೂರ್ಣ ಸುದ್ದಿ ಮಾಧ್ಯಮ ಸಮರಸ ಸುದ್ದಿ.
 


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries