HEALTH TIPS

ಕೋವಿಡ್ ಬಾಧಿಸಿ ಐ.ಸಿ.ಯುವಿನಲ್ಲಿದ್ದ ಅಜ್ಜನ ಭೇಟಿಗೆ ವೈದ್ಯೆಯಾದ ಮೊಮ್ಮಗಳಿಗೆ ಅವಕಾಶ ನಿರಾಕರಣೆ: ಮಾನವ ಹಕ್ಕುಗಳ ಆಯೋಗದಿಂದ ತನಿಖೆಗೆ ಆದೇಶ

Top Post Ad

Click to join Samarasasudhi Official Whatsapp Group

Qries

               ತಿರುವನಂತಪುರ: ತಿರುವನಂತಪುರ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೃದ್ಧ ರೋಗಿಯನ್ನು ಭೇಟಿ ಮಾಡಲು ಅದೇ ಆಸ್ಪತ್ರೆಯಲ್ಲಿ ಕೋವಿಡ್ ಕರ್ತವ್ಯ ವೈದ್ಯರ ಮೊಮ್ಮಗಳಿಗೆ ಅವಕಾಶ ನೀಡಿಲ್ಲ ಎಂಬ ದೂರಿನ ಮೇರೆಗೆ ರಾಜ್ಯ ಮಾನವ ಹಕ್ಕುಗಳ ಆಯೋಗ ಡಿಎಂಇಯಿಂದ ವಿವರಣೆ ಕೋರಿದೆ.

                 ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಆಂಥೋನಿ ಡೊಮಿನಿಕ್ ಅವರು ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ (ಡಿಎಂಇ) ದೂರಿನ ಬಗ್ಗೆ ವಿವರವಾದ ತನಿಖೆ ನಡೆಸಿ ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸುವಂತೆ ಕೇಳಿಕೊಂಡರು. ಪೂಜಾಪ್ಪುರ ನಿವಾಸಿ ಸುನೀತಾ ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಸುನೀತಾ ಅವರ ಮಗಳು ತಿರುವನಂತಪುರ ವೈದ್ಯಕೀಯ ಕಾಲೇಜಿನ ಪಿ.ಜಿ. ಕೋವಿಡ್ ವಿದ್ಯಾರ್ಥಿ ಮತ್ತು ಕರ್ತವ್ಯದಲ್ಲಿರುವ ವೈದ್ಯೆ.

                  ಜೂನ್ 2 ರಂದು ಸುನೀತಾ ಅವರ ತಂದೆ ತಂಗಕುಟ್ಟನ್ ಅವರನ್ನು ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಸೋಂಕು ಉಲ್ಬಣಗೊಂಡಿದ್ದರಿಂದ ಅವರನ್ನು ವೈದ್ಯಕೀಯ ಐಸಿಯುಗೆ ವರ್ಗಾಯಿಸಲಾಯಿತು. ಐಸಿಯುನಲ್ಲಿದ್ದಾಗ, ದೂರುದಾರರ ಮಗಳ ಅಜ್ಜ ಔಷಧಿ ಮತ್ತು ಆಹಾರವನ್ನು ತಲುಪಿಸುತ್ತಿದ್ದರು. ಆದರೆ, ಜೂನ್ 14 ರಂದು ಐಸಿಯುಗೆ ಆಗಮಿಸಿದ ದೂರುದಾರರ ಮಗಳಿಗೆ ಡ್ಯೂಟಿ ನರ್ಸ್ ಐಸಿಯುಗೆ ಪ್ರವೇಶಿಸುವುದನ್ನು ನಿರ್ಬಂಧಿಸಿದರು. ಬಳಿಕ ನರ್ಸ್ ದೂರುದಾರರ ಮಗಳ ವಿರುದ್ಧ ದೂರು ದಾಖಲಿಸಿ ಬೆದರಿಕೆ ಹಾಕಿದ್ದಳು. ಪಿ. ಜಿ.  ಅಧ್ಯಯನ ನಿರತರಾದವರಿಗೆ ಒಳಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಬೆದರಿಸಲಾಗಿತ್ತು. ವೈದ್ಯಕೀಯ ಕಾಲೇಜು ಆಸ್ಪತ್ರೆ ಅಧೀಕ್ಷಕರು ಮತ್ತು ಆರ್‍ಎಂಒ ಈ ಪ್ರಕರಣದಲ್ಲಿ ವಿರುದ್ದ ಕಕ್ಷಿದಾರರಾಗಿದ್ದಾರೆ. 


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries