HEALTH TIPS

ಕೇಂದ್ರ ಸಂಪುಟ ಪುನಃರಚನೆ:ಮೊದಲ ಸಚಿವ ಸಂಪುಟ ಕೇರಳ ಶೈಲಿಯಲ್ಲಿ ಗಮನ ಸೆಳೆದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್


         ನವದೆಹಲಿ: ಕೇಂದ್ರ ಸಚಿವ ಸಂಪುಟ ಪುನಃ  ರಚನೆಯ ಬಳಿಕ ನಿನ್ನೆ ಸಂಜೆ ನಡೆದ ಮೊದಲ ಸಂಪುಟ ಸಭೆಯಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಮಲಯಾಳಿ ಶೈಲಿಯ ಧೋತಿ ಧರಿಸಿ ಗಮನ ಸೆಳೆದರು.  ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಕೌಶಲ್ಯ ಅಭಿವೃದ್ಧಿ ಇಲಾಖೆಗಳ ಉಸ್ತುವಾರಿ ವಹಿಸಿಕೊಂಡ ಎರಡನೇ ಮೋದಿ ಸರ್ಕಾರದ ಮೊದಲ ಪುನರ್ರಚನೆಯಲ್ಲಿ ಪರಿಗಣಿಸಲ್ಪಟ್ಟ ಏಕೈಕ ಮಲಯಾಳಿ ರಾಜೀವ್ ಚಂದ್ರಶೇಖರ್.
        ಏತನ್ಮಧ್ಯೆ, ರಾಜೀವ್ ಚಂದ್ರಶೇಖರ್ ಅವರನ್ನು ಮಂತ್ರಿ ಹುದ್ದೆಗೆ ನೀಡಿದ ಬೆನ್ನಿಗೆ ಕೇರಳದ ಇತರ ಯಾರನ್ನೂ  ರಾಜ್ಯಪಾಲ ಮತ್ತು ಮಂತ್ರಿ ಹುದ್ದೆಗಳಿಗೆ ಪರಿಗಣಿಸದಿರುವ ಬಗ್ಗೆ ಬಿಜೆಪಿ ಕೇರಳ ಘಟಕ ಅಸಮಾಧಾನ ವ್ಯಕ್ತಪಡಿಸಿದೆ.
       ಚಂದ್ರ ಶೇಖರ್ ಅವರ ಪರಿಗಣನೆ ಮತ್ತು ಕುಮ್ಮನಂ ಸೇರಿದಂತೆ ಇತರ ನಾಯಕರನ್ನು ಕಡೆಗಣಿಸಿದ್ದರಿಂದ ಕೇರಳ ಘಟಕದಲ್ಲಿ ಅತೃಪ್ತಿ ವ್ಯಕ್ತಗೊಂಡಿದೆ ಎನ್ನಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries