HEALTH TIPS

ರಾಜ್ಯದಲ್ಲಿ ನಾಳೆ ಮತ್ತು ಭಾನುವಾರ ಸಂಪೂರ್ಣ ಲಾಕ್‍ಡೌನ್

                       ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ವ್ಯಾಪಕತೆಯ ಹಿನ್ನೆಲೆಯಲ್ಲಿ ಕಳೆದ ಎರಡು ವಾರಗಳ ಹಿಂದೆ ಜಾರಿಗೆ ತರಲಾದ ವಾರಾಂತ್ಯ ಲೋಕ್ ಡೌನ್ ನಾಳೆ ಹಾಗೂ ಭಾನುವಾರವೂ ವಿಸ್ತರಿಸಲ್ಪಟ್ಟಿದೆ. ಖಾಸಗಿ ಬಸ್ ಸೇವೆ ಇರುವುದಿಲ್ಲ. ಆದರೆ, ಶನಿವಾರ ಮತ್ತು ಭಾನುವಾರ ನಿಗದಿಯಾಗಿದ್ದ ಪರೀಕ್ಷೆಗಳು ನಡೆಯಲಿದೆ. ಅಗತ್ಯ ಸೇವೆಗಳ ವಲಯದಲ್ಲಿರುವವರಿಗೆ ಕೆ.ಎಸ್.ಆರ್.ಟಿ.ಸಿ. ಕೆಲವು ಸೇವೆಗಳನ್ನು ನಡೆಸಲಿದೆ. ನಿರ್ಮಾಣ ಕ್ಷೇತ್ರದಲ್ಲಿ ಇರುವವರು ಕೆಲಸ ಮಾಡಬಹುದು.

                   ಪ್ರಯಾಣಾನುಮತಿಗೆ ಹತ್ತಿರದ ಪೋಲೀಸ್ ಠಾಣೆಯಲ್ಲಿ ಮುಂಚಿತವಾಗಿ ದಾಖಲೆ ಸಲ್ಲಿಸಬೇಕು.  ಟಿಪಿಆರ್  0 - 5 (ಸೆಕ್ಷನ್ ಎ), 5 - 10 (ಸೆಕ್ಷನ್ ಬಿ), 10 - 15 (ಸೆಕ್ಷನ್ ಸಿ) ಮತ್ತು 15 ಕ್ಕಿಂತ ಹೆಚ್ಚಿನ ಪ್ರದೇಶ (ಸೆಕ್ಷನ್ ಡಿ) ಎಂದು ಮರುಹೊಂದಿಸಲಾಗಿದೆ. ಅದಕ್ಕೆ ತಕ್ಕಂತೆ ವಿನಾಯಿತಿ ಮತ್ತು ನಿರ್ಬಂಧಗಳು ಗುರುವಾರದಿಂದ ಜಾರಿಗೊಳಿಸಲಾಗಿದೆ. 

                ಟ್ರಿಪಲ್ ಲಾಕ್‍ಡೌನ್‍ನಂತೆಯೇ ಕಟ್ಟುನಿಟ್ಟಿನ ನಿಯಂತ್ರಣವು ಟಿಪಿಆರ್ 15ಕ್ಕಿಂತ ಮೇಲಿನ ಪ್ರದೇಶಗಳಲ್ಲಿ ಮುಂದುವರಿಯುತ್ತದೆ.

             ಕೇರಳದಲ್ಲಿ ಪರೀಕ್ಷಾ ಸಕಾರಾತ್ಮಕತೆ ಪ್ರಮಾಣ ಇಂದು  10.04 ಶೇ.ಆಗಿದೆ. ಪರೀಕ್ಷಿಸಿದ 1,30,424 ಮಾದರಿಗಳಲ್ಲಿ 13,563 ಮಂದಿಗೆ ಕೋವಿಡ್ ದೃಢಪಟ್ಟಿದೆ. ಮಲಪ್ಪುರಂ 1962, ಕೋಝಿಕೋಡ್ 1494, ಕೊಲ್ಲಂ 1380, ತ್ರಿಶೂರ್ 1344, ಎರ್ನಾಕುಳಂ 1291, ತಿರುವನಂತಪುರ 1184, ಪಾಲಕ್ಕಾಡ್ 1049, ಕಣ್ಣೂರು 826, ಆಲಪ್ಪುಳ 706, ಕೊಟ್ಟಾಯಂ 683, ಕಾಸರಗೋಡು 576, ಪತ್ತನಂತಿಟ್ಟು 420, ವಯನಾಡ್ 335, ಇಡುಕ್ಕಿ 313 ಎಂಬಂತೆ ಸೋಂಕು ದೃಢಪಟ್ಟಿದೆ.

            ಕೋವಿಡ್‍ನ ಎರಡನೇ ತರಂಗವನ್ನು ನಿಭಾಯಿಸಲು 23,123 ಕೋಟಿ ರೂ.ಗಳ ತುರ್ತು ಪ್ಯಾಕೇಜ್‍ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು.ಕೇಂದ್ರ ಸರ್ಕಾರದ ಪಾಲು 15,000 ಕೋಟಿ ರೂ. 8000 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರಗಳು ಭರಿಸಬೇಕಿದೆ. ಈ ಹಣವನ್ನು ಮುಖ್ಯವಾಗಿ ವೈದ್ಯಕೀಯ ಸೌಲಭ್ಯಕ್ಕಾಗಿ ಖರ್ಚು ಮಾಡಲಾಗುವುದು.

                  ದೇಶದಾದ್ಯಂತ 736 ಜಿಲ್ಲೆಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಕೋವಿಡ್ ವಿಪತ್ತು ಪರಿಹಾರ ನಿಧಿಯಿಂದ 20,000 ಐಸಿಯು ಹಾಸಿಗೆಗಳನ್ನು ವ್ಯವಸ್ಥೆಗೊಳಿಸಲಾಗುತ್ತದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries