HEALTH TIPS

ಹೊಸ ಮತದಾರರ ದಾಖಲಾತಿ: ಆಧಾರ್‌ ಬಳಕೆಗೆ ಯುಐಡಿಎಐಗೆ ಕೇಂದ್ರ ಪತ್ರ

            ನವದೆಹಲಿ: ಹೊಸ ಮತದಾರರ ದಾಖಲಾತಿಗೆ ಆಧಾರ್‌ ಕಾರ್ಡ್‌ ಬಳಕೆ ಮಾಡಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರ ವಿಶಿಷ್ಟ ಗುರುತುಚೀಟಿ ಪ್ರಾಧಿಕಾರ(ಯುಐಡಿಎಐ)ಕ್ಕೆ ಮನವಿ ಮಾಡಿದೆ.

         ಆಧಾರ್‌ ಕಾರ್ಡ್‌ನಿಂದ ವಿಳಾಸ ಬದಲಾವಣೆಯಂತಹ ಇತರ ಸೇವೆಗಳು ವೇಗವಾಗಿ ನಡೆಯುತ್ತವೆ ಎಂದು ಕಾನೂನು ಸಚಿವಾಲಯ ಸಲಹೆ ನೀಡಿದೆ. 2020ರ 'ಉತ್ತಮ ಆಡಳಿತಕ್ಕೆ ಆಧಾರ್‌ ದೃಢೀಕರಣ ನೀತಿ 3'ರ ಅಡಿಯಲ್ಲಿ ಇ-ಇಪಿಐಸಿ(ವಿದ್ಯುನ್ಮಾನ ಮತದಾರರ ಭಾವಚಿತ್ರದ ಗುರುತಿನ ಚೀಟಿ) ಅಥವಾ ಮತದಾರರ ಚೀಟಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.

          ವಿದ್ಯುನ್ಮಾನ ಮತ್ತು ತಂತ್ರಜ್ಞಾನ ಮಾಹಿತಿ ಸಚಿವಾಲಯವು ಕಳೆದ ವರ್ಷ ಆಗಸ್ಟ್‌ 5ರಲ್ಲಿ, 'ಉತ್ತಮ ಆಡಳಿತ, ಸಾರ್ವಜನಿಕ ನಿಧಿ ಸೋರಿಕೆ ತಡೆ, ನಾಗರಿಕರ ಬದುಕಿನ ಸರಳೀಕರಣ, ಸುಲಲಿತ ಸೇವೆಗಳನ್ನು ಒದಗಿಸಲು ಆಧಾರ್‌ ದೃಢೀಕರಣ ಅಗತ್ಯ' ಎಂದು ಪ್ರತಿಪಾದಿಸಿತ್ತು.

            ಇದೀಗ ಕೇಂದ್ರ ಸರ್ಕಾರ ನೂತನ ಮತದಾರರ ದಾಖಲಾತಿಗೆ ಆಧಾರ್‌ ದೃಢೀಕರಣಕ್ಕೆ ಅವಕಾಶ ನೀಡಬೇಕು ಎಂದು ಯುಐಡಿಎಐಗೆ ಪತ್ರ ಬರೆದಿದೆ ಎಂದು 'ದಿ ಇಂಡಿಯನ್‌ ಎಕ್ಸ್‌ಪ್ರೆಸ್‌' ವರದಿ ಮಾಡಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries