ಕೋಝಿಕ್ಕೋಡ್: ಕಲ್ಲಿಕೋಟೆ ವಿಶ್ವವಿದ್ಯಾಲಯವು ವರದಕ್ಷಿಣೆ ಬೆಂಬಲಿಸುವುದಿಲ್ಲ ಎಂದು ವಿದ್ಯಾರ್ಥಿಗಳಿಂದ ಲಿಖಿತ ಅಫಿಡವಿಟ್ ತೆಗೆದುಕೊಂಡಿದೆ. ಪದವಿ ಪ್ರಮಾಣಪತ್ರಗಳನ್ನು ಸ್ವೀಕರಿಸುವ ಮೊದಲು ವಿದ್ಯಾರ್ಥಿಗಳು ವರದಕ್ಷಿಣೆ ವಿರೋಧಿ ಪ್ರಮಾಣಪತ್ರಕ್ಕೆ ಸಹಿ ಹಾಕಿದರು. ಪ್ರಮಾಣಪತ್ರಕ್ಕೆ ವಿರುದ್ಧವಾದ ಚಟುವಟಿಕೆಗಳು ಪದವಿ ಪ್ರಮಾಣಪತ್ರವನ್ನು ರದ್ದುಗೊಳಿಸಲು ಕಾರಣವಾಗಬಹುದು ಎಂದು ಕಾನೂನು ಹೇಳುತ್ತದೆ.
ಕಲ್ಲಿಕ್ಕೋಟೆ ವಿಶ್ವವಿದ್ಯಾಲಯದಲ್ಲಿ ಕುಲಪತಿಯಾಗಿರುವ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸೂಚನೆ ಮೇರೆಗೆ ಅಫಿಡವಿಟ್ ನ್ನು ಕಡ್ಡಾಯಗೊಳಿಸಲಾಗಿದೆ. ಕಳೆದ ವಾರ, ಕೇರಳ ವಿಶ್ವವಿದ್ಯಾಲಯದಿಂದ ಮೀನುಗಾರಿಕೆ ಮತ್ತು ಸಾಗರ ವಿಜ್ಞಾನದಲ್ಲಿ ಪದವಿ ಪ್ರಮಾಣಪತ್ರಗಳನ್ನು ಸ್ವೀಕರಿಸಲು ಬಂದ 386 ವಿದ್ಯಾರ್ಥಿಗಳು ವರದಕ್ಷಿಣೆ ವಿರೋಧಿ ಪ್ರಮಾಣಪತ್ರಕ್ಕೆ ಸಹಿ ಹಾಕಿದರು.
ವರದಕ್ಷಿಣೆ ಕಿರುಕುಳ ಮತ್ತು ರಾಜ್ಯದಲ್ಲಿ ಆ ಕಾರಣದ ಮರಣಗಳ ಹಿನ್ನೆಲೆಯಲ್ಲಿ ರಾಜ್ಯಪಾಲರು ವರದಕ್ಷಿಣೆ ವಿರೋಧಿ ಅಫಿಡವಿಟ್ ಕಲ್ಪನೆಯನ್ನು ಪ್ರಸ್ತಾಪಿಸಿದ್ದರು. ಕೊಲ್ಲಂನಲ್ಲಿ ವಿಸ್ಮಯ ಸಾವಿನ ಪ್ರಕರಣದ ಬಳಿಕ ರಾಜ್ಯಪಾಲರು ಇಂತಹದೊಂದು ಕ್ರಮಕ್ಕೆ ಮುಂದಾಗಿ ಸೂಚನೆ ನೀಡಿದ್ದರು.