HEALTH TIPS

ಕೆ.ಎಸ್.ಆರ್.ಟಿ.ಸಿ. ಬಸ್‍ಗಳನ್ನು ಕೂಡ ಮೀನು ಮಾರಾಟಕ್ಕೆ ಬಳಸಲಾಗುವುದು; ತ್ಯಾಜ್ಯ ವಿಲೇವಾರಿಗಾಗಿ ಬಸ್ಸುಗಳನ್ನು ಬಳಸುವ ಬಗ್ಗೆ ಒಕ್ಕೂಟಗಳು ದೂರು ನೀಡಿಲ್ಲ; ಸಚಿವ ಆಂಟನಿ ರಾಜು

                                   

                    ತಿರುವನಂತಪುರಂ: ಕೆ.ಎಸ್.ಆರ್.ಟಿ.ಸಿ. ಬಸ್‍ಗಳನ್ನು ಕೂಡ ಮೀನು ಮಾರಾಟಕ್ಕೆ ಬಳಸಲಾಗುವುದು ಎಂದು ಸಾರಿಗೆ ಸಚಿವ ಆಂಟನಿ ರಾಜು ಹೇಳಿರುವರು. ಈ ನಿಟ್ಟಿನ ಚಿಂತನೆ ಪ್ರಗತಿಯಲ್ಲಿದೆ ಎಮದು ಸಚಿವರು ಮುನ್ಸೂಚನೆ ನೀಡಿದರು. ತ್ಯಾಜ್ಯ ವಿಲೇವಾರಿಗಾಗಿ ಬಸ್ಸುಗಳನ್ನು ಬಳಸುವ ಬಗ್ಗೆ ಸಂಘಗಳು ದೂರು ನೀಡಿಲ್ಲ ಎಂದು ಅವರು ಹೇಳಿದರು.

                           ಮೀನುಗಾರಿಕಾ ಇಲಾಖೆಯ ಸಹಯೋಗದಲ್ಲಿ, ಮೀನು ಮಾರಾಟಕ್ಕೆ  ಬಸ್‍ಗಳನ್ನು ಬಳಸಲು ಪರಿಗಣಿಸಲಾಗುತ್ತಿದೆ. ಇತ್ತೀಚೆಗೆ, ಮೀನು ಮಾರಾಟ ಮಾಡುವ ಮಹಿಳೆಯರಿಗೆ ಕೆಲವು ಅವಘಡಗಳು ಸಂಭವಿಸಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಬಸ್ಸುಗಳನ್ನು ಮೀನು ಮಾರಾಟಕ್ಕೆ ಬಳಸುವಂತೆ ಸೂಚಿಸಲಾಗಿದೆ. ಸೌಲಭ್ಯಗಳನ್ನು ಡಿಪೆÇೀಗಳಲ್ಲಿ ಸ್ಥಾಪಿಸಲಾಗುವುದು ಎಂದರು.

                    ತ್ಯಾಜ್ಯ ವಿಲೇವಾರಿಗಾಗಿ ಕೆ.ಎಸ್.ಆರ್.ಟಿ.ಸಿ. ಬಸ್‍ಗಳನ್ನು ಬಳಸುವ ನಿರ್ಧಾರದ ಬಗ್ಗೆ ಒಕ್ಕೂಟಗಳು ದೂರು ನೀಡಿಲ್ಲ. ಚಾಲಕರು ಕಸವನ್ನು ವಿಲೇವಾರಿ ಮಾಡಬೇಕಾಗಿಲ್ಲ. ಬಸ್ಸನ್ನು ಚಲಾಯಿಸಿದರಷ್ಟೇ ಸಾಕು. ಸ್ಥಳೀಯಾಡಳಿತ ಸರ್ಕಾರದ ನಿರ್ಧಾರಕ್ಕಾಗಿ ಕಾಯಲಾಗುತ್ತಿದೆ. ನಿರ್ಧಾರ ಪ್ರಕಟಿಸಿದ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries