HEALTH TIPS

ಹವಾಮಾನ ವೈಪರೀತ್ಯ: ಕಣ್ಣೂರು, ಮಂಗಳೂರಿಗೆ ಬರಬೇಕಿದ್ದ ವಿಮಾನಗಳು ಕೊಚ್ಚಿಯಲ್ಲಿ ಲ್ಯಾಂಡ್

                 ಕೊಚ್ಚಿ: ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಲ್ಯಾಂಡಿಂಗ್ ನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.  ಕಣ್ಣೂರು ಮತ್ತು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇಳಿಯಬೇಕಿದ್ದ ವಿಮಾನಗಳನ್ನು ಹವಾಮಾನದ ಅಸಮರ್ಪಕತೆಯಿಂದ ಕೊಚ್ಚಿ ನೆಡುಂಬಶೇರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು.

              ದುಬೈನಿಂದ ಕಣ್ಣೂರಿಗೆ ಪ್ರಯಾಣಿಕರನ್ನು ಹೊತ್ತುತಂದ ಏರ್ ಇಂಡಿಯಾ ವಿಮಾನ ಮತ್ತು ಮಂಗಳೂರು ನಿಲ್ದಾಣದಲ್ಲಿ ಇಳಿಯಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳನ್ನು ಕೊಚ್ಚಿಯಲ್ಲಿ ಇಳಿಸಲಾಯಿತು.  ಪ್ರಯಾಣಿಕರು ವಿಮಾನದಲ್ಲಿಯೇ ಇದ್ದಾರೆಂದು ತಿಳಿದುಬಂದಿದೆ. 

                ಹವಾಮಾನವು ಅನುಕೂಲಕರವಾಗಿದ್ದರೆ ವಿಮಾನಗಳು ತಮ್ಮ ವಿಮಾನ ನಿಲ್ದಾಣಗಳಿಗೆ ಹಿಂತಿರುಗುತ್ತವೆ. ಏರ್ ಇಂಡಿಯಾ ಅಧಿಕಾರಿಗಳು ತಾವು ಶೀಘ್ರವೇ ಹಿಂತಿರುಗುವ ಭರವಸೆ ಹೊಂದಿದ್ದೇವೆ ಎಂದು ಹೇಳಿರುವರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries