ಕಾಸರಗೋಡು: ಬ್ರಹ್ಮಶ್ರೀ ನಾರಾಯಣಗುರು ಸಮಾಧಿ ದಿನಾಚರಣೆ ಮಂಗಳವಾರ ಜರುಗಿತು. ಶ್ರೀ ನಾರಾಯಣ ಧರ್ಮ ಪರಿಪಾಲನಂ(ಎಸ್ಎನ್ಡಿಪಿ)ಯೋಗಂ ಕಾಸರಗೋಡು ಘಟಕದಿಂದ ಸಂಘಟನೆ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಎಸ್ಎನ್ಡಿಪಿ ಕಾಸರಗೋಡು ಘಟಕ ಕಾರ್ಯದರ್ಶಿ ಗಣೇಶ್ ಪಾರೆಕಟ್ಟ ಪುಷ್ಪಾರ್ಚನೆ ನಡೆಸುವ ಮೂಲಕ ಗೌರವಾರ್ಪಣೆ ನಡೆಸಿದರು. ಯೋಗಂ ನಿರ್ದೇಶಕ ವಕೀಲ ಪಿ.ಕೆ ವಿಜಯನ್, ವೆಳ್ಳುಂಗನ್ ಮಾಸ್ಟರ್, ಮೋಹನನ್ ಮೀಪುಗುರಿ, ರಾಜೇಶ್ ಚೆರ್ಕಳ, ಕೃಷ್ಣನ್ ಕೂಡ್ಲು, ವಿಜಯನ್ ಮನ್ನಿಪ್ಪಾಡಿ ಉಪಸ್ಥಿತರಿದ್ದರು.