ಕಾಸರಗೋಡು: ಪ್ರಾಥಮಿಕ ಪೂರ್ವ ಮಕ್ಕಳನ್ನು ಶಾಲೆಗಳಿಗೆ ಸ್ವಾಗತಿಸುವ ನಿಟ್ಟಿನಲ್ಲಿ ಕುತೂಹಲ ಮೂಡಿಸುವ "ಆಟದ ವಲಯ(ಆಕ್ಟಿವಿಟಿ ಕಾರ್ನರ್)" ನಿರ್ಮಿಸುವ ಮೂಲಕ ಗಮನಸೆಳೆಯುತ್ತಿದೆ.
ಕಾಸರಗೋಡು ಬಿ.ಆರ್.ಸಿ.ಯು "ಸಮಗ್ರ ಶಿಕ್ಷಣ ಕೇರಳ" ಯೋಜನೆ ಮೂಲಕ ಪ್ರಾಥಮಿಕ ಪೂರ್ವ ಶಾಲೆಗಳಲ್ಲಿ ಆಕ್ಟಿವಿಟಿ ಕಾರ್ನರ್ ನಿರ್ಮಿಸಲಾಗುತ್ತಿದೆ. ಕಾಸರಗೋಡು ಬಿ.ಆರ್.ಸಿ. ವ್ಯಾಪ್ತಿಯ 11 ಅಂಗೀಕೃತ ಪ್ರಾಥಮಿಕ ಪೂರ್ವ ಶಾಲೆಗಳಲ್ಲಿ ಕಲಿಕಾನುಭವಗಳನ್ನು ಉತ್ಸವವಾಗಿಸುವ ನಿಟ್ಟಿನಲ್ಲಿ ಆಕ್ಟಿವಿಟಿ ಕಾರ್ಮರ್ ನಿರ್ಮಿಸಲಾಗುವುದು. ಬಿ.ಆರ್.ಸಿ. ವಿಶ್ವ? ನಿಧಿ ಬಳಸಿ ಮತ್ತು ಶಿಕ್ಷಕರ ಒಗ್ಗಟ್ಟಿನೊಂದಿಗೆ ಇವುಗಳ ನಿರ್ಮಾಣ ನಡೆಯಲಿದೆ.
ಈ ಕಾರ್ಯಕ್ರಮದ ಉಪಜಿಲ್ಲಾ ಮಟ್ಟದ ಉದ್ಘಾಟನೆ ಅಡ್ಕತ್ತಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಕಾಸರಗೋಡು ನಗರಸಭೆ ಅಧ್ಯಕ್ಷ ನ್ಯಾಯವಾದಿ ವಿ.ಎಂ.ಮುನೀರ್ ಉದ್ಘಾಟಿಸಿದರು. ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ರಜನಿ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಶಿಕ್ಷಣಾಧಿಕಾರಿ ಆಗಸ್ಟಿನ್ ಬರ್ನಾಡ್, ಮಾಯಿಪ್ಪಾಡಿ ಡಯಟ್ ಫಾಕ್ವೆಲ್ಟಿ ಡಾ.ವಿನೋದ್ ಕುಮಾರ್ ಪೆರುಂಬಳ, ವಾರ್ಡ್ ಸದಸ್ಯೆ ಅಶ್ವಿನಿ ನಾಯ್ಕ್, ಮುಖ್ಯಶಿಕ್ಷಕಿ ಕೆ.ಎ.ಯಶೋದಾ, ರಕ್ಷಕ-ಶಿಕ್ಷಕ ಸಂಘಟದ ಅಧ್ಯಕ್ಷ ಸುರೇಂದ್ರನ್, ರೋಶ್ನಾ ಮೊದಲಾದವರು ಉಪಸ್ಥಿತರಿದ್ದರು. ಕಾಸರಗೋಡು ಬ್ಲೋಕ್ ಯೋಜನೆ ಸಂಚಾಲಕ ಟಿ.ಕಾಸಿಂ ಸ್ವಾಗತಿಸಿದರು. ಶಿಕ್ಷಕಿ ಶೈಲಜಾ ವಂದಿಸಿದರು.