HEALTH TIPS

ಮಾರಾಟ ಮಾಡಲಾಗಿದೆ ಎಂದು ವಿಮರ್ಶಕರು ಹೇಳುತ್ತಾರೆ; ಅಭಿವೃದ್ಧಿಯ ವಿಚಾರದಲ್ಲಿ ಯಾಕಿಷ್ಟು ಅಸ್ವಸ್ಥತೆ: ಅದಾನಿ ಸಮೂಹಕ್ಕೆ ನೀಡಿದ ತಿರುವನಂತಪುರ ವಿಮಾನ ನಿಲ್ದಾಣದ ಬಗ್ಗೆ ಸಂಪೂರ್ಣ ತೃಪ್ತಿ ಇದೆ: ಸುರೇಶ್ ಗೋಪಿ

                      ತಿರುವನಂತಪುರಂ: ತಿರುವನಂತಪುರಂ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಸಮೂಹಕ್ಕೆ ನೀಡಿರುವ ಬಗ್ಗೆ ಬಿಜೆಪಿ ಸಂಸದ ಸುರೇಶ್ ಗೋಪಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ತೃಪ್ತಿ ಇದೆ. ಎಲ್ಲವನ್ನೂ ಮಾರಾಟ ಮಾಡಲಾಗಿದೆ ಎಂದು ವಿಮರ್ಶಕರು ನನಗೆ ಹೇಳಬಹುದು. ವಿಮರ್ಶಕರಿಗೆ ಜನರ ಪ್ರಯಾಣದ ತೊಂದರೆಗಳನ್ನು ಪರಿಹರಿಸಲು ಸಾಧ್ಯವಾಗಲಿಲ್ಲ ಎಂದು ಅವರು ಬೊಟ್ಟುಮಾ|ಡಿದರು. 

                  ವಿಮಾನ ನಿಲ್ದಾಣವು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಿದರೆ, ಈಗ ಏರುತ್ತಿರುವ ಎಲ್ಲಾ ಟೀಕೆಗಳೂ ಕೊನೆಗೊಳ್ಳುತ್ತದೆ.  ಸುಧೀಘರ್| ಕಾಲಗಳಿಂದ ಜನರ ಪ್ರಯಾಣದ ಸಮಸ್ಯೆಗಳನ್ನು ಪರಿಹರಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಇದು ಈಗ ಸಾಧ್ಯವೇ ಎಂದು ನಾವು ನೋಡುತ್ತೇವೆ ಎಂದು ಸುರೇಶ್ ಗೋಪಿ ಸ್ಪಷ್ಟಪಡಿಸಿದರು.

                   ಈಗ ಹೊಸ ವ್ಯವಸ್ಥೆ ಬಂದಿದೆ. ವಿಮಾನ ನಿಲ್ದಾಣವನ್ನು ಮಾರಾಟ ಮಾಡಲಾಗಿದೆ ಎಂದು ವಿಮರ್ಶಕರು ಹೇಳುತ್ತಾರೆ. ಆದರೆ ಅದು ಹಾಗಲ್ಲ. ಅದಾನಿ ಸಮೂಹಕ್ಕೆ ನಿರ್ವಹಣೆಯನ್ನು ಮಾತ್ರ ಹಸ್ತಾಂತರಿಸಲಾಗಿದೆ ಎಂದು ಸುರೇಶ್ ಗೋಪಿ ಹೇಳಿದರು.

            ಕೊರೋನಾದ ನಂತರ ಮೂರು ತಿಂಗಳು ಎಮಿರೇಟ್ಸ್ ಮತ್ತು ಇತಿಹಾದ್ ತಿರುವನಂತಪುರಕ್ಕೆ ಬಂದಿರಲಿಲ್ಲ. ಇದು ಭಾರತದ ಎರಡನೇ ವಿಮಾನ ನಿಲ್ದಾಣವಾಗಿದ್ದು, ಅದನ್ನು ಉತ್ತಮವಾಗಿ ಬದಲಾಯಿಸಬೇಕಾಗಿದೆ. ಅಭಿವೃದ್ಧಿ ಬರಲಿ. ಈ ಬಗ್ಗೆ ಯಾರು ಅಸ್ವಸ್ಥರಾಗಿದ್ದಾರೆ? ಪ್ರಯಾಣಿಕರಿಗೆ  ಮುಂಬೈ ಮತ್ತು ದೆಹಲಿ ವಿಮಾನ ನಿಲ್ದಾಣಗಳಲ್ಲಿ ಲಭಿಸುವ ಸೌಕರ್ಯಗಳು ಇಲ್ಲಿಯೂ ಲಭಿಸಬೇಕು ಎಂದು ಅವರು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries