HEALTH TIPS

ಇನ್ನು ಗಂಗಾನದಿಯಲ್ಲಿ ಹರಿಯುವುದು ಶುದ್ಧೀಕರಿಸಿದ ನೀರು; ವಾರಣಾಸಿಯಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ ಸ್ಥಾಪನೆ

                   ನವದೆಹಲಿ: ಪವಿತ್ರ ಗಂಗಾ ನದಿಗೆ ಹರಿಯುವ ನೀರನ್ನು ಶುದ್ಧೀಕರಿಸಲು ವಾರಣಾಸಿಯಲ್ಲಿ ಒಳಚರಂಡಿ ಸಂಸ್ಕರಣಾ ಘಟಕವನ್ನು ಸ್ಥಾಪಿಸಲಾಗಿದೆ. ಗಂಗಾನದಿಯನ್ನು ರಕ್ಷಿಸುವ ಮತ್ತು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಅತ್ಯಾಧುನಿಕ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಯಾವುದೇ ಹಾನಿಯಾಗದಂತೆ 10-15 ವರ್ಷಗಳವರೆಗೆ ಕಾರ್ಯನಿರ್ವಹಿಸಬಹುದಾಗಿದೆ ಎಂದು ನಮಾಮಿ ಗಂಗಾ ಮಿಷನ್ ಅಧಿಕಾರಿಗಳು ತಿಳಿಸಿದ್ದಾರೆ.

                    ನಮಾಮಿ ಗಂಗಾ ಮಿಷನ್ ಗಂಗೆಯನ್ನು ಶುದ್ಧೀಕರಿಸಲು ಮತ್ತು ರಕ್ಷಿಸಲು ಪ್ರಾರಂಭಿಸಲಾದ ಯೋಜನೆಯಾಗಿದೆ. ವಾರಣಾಸಿಯ ರಾಮನಗರದಲ್ಲಿ ಸ್ಥಾಪಿಸಲಾದ ಮೊದಲ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಇದಾಗಿದ್ದು, ಅಂತಹ ಹಲವಾರು ಸ್ಥಳಗಳಲ್ಲಿ ಸ್ಥಾವರವನ್ನು ಸ್ಥಾಪಿಸಲಾಗುವುದು ಎಂದು ಜಲವಿದ್ಯುತ್ ಸಚಿವಾಲಯ ತಿಳಿಸಿದೆ. ಇದನ್ನು ಇತ್ತೀಚಿನ ಂ20 (ಅನಾರೋಬಿಕ್-ಅನಾಕ್ಸಿಕ್-ಅನಾಕ್ಸಿಕ್) ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗುತ್ತದೆ. 10 ಎಂಎಲ್ ಡಿ  ಸಾಮಥ್ರ್ಯದ ಈ ವ್ಯವಸ್ಥೆಯು ಯಾವುದೇ ಕಲುಷಿತ ನೀರನ್ನು ಶುದ್ಧೀಕರಿಸುತ್ತದೆ. ವಿವಿಧ ದೇಶಗಳ ಆಧುನಿಕ ಉಪಕರಣಗಳನ್ನು ಬಳಸಿರುವ ಈ ಯಂತ್ರಗಳಿಂದ ಶುದ್ಧೀಕರಿಸಿದ ನಂತರವೇ ನೀರು ಈಗ ಗಂಗೆಗೆ ಹರಿಯುತ್ತದೆ.

                    ನವೆಂಬರ್ 12, 2018 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಗಂಗಾ ನದಿ ಸೋಂಕು ನಿವಾರಣೆ  ಭಾಗವಾಗಿ ಒಳಚರಂಡಿ ಸಂಸ್ಕರಣಾ ಘಟಕಕ್ಕೆ ಶಂಕುಸ್ಥಾಪನೆ ಮಾಡಿದರು. ವ್ಯವಸ್ಥೆಯ ಒಟ್ಟು ವೆಚ್ಚ 72.91 ಕೋಟಿ ರೂ.ಆಗಿದೆ. ಈ ವ್ಯವಸ್ಥೆಯ ಮೂಲಕ ವಾರಣಾಸಿಯ ಐದು ಚರಂಡಿಗಳ ಶುದ್ಧೀಕರಿಸಿದ ನೀರು ಮಾತ್ರ ಗಂಗಾನದಿಯನ್ನು ಸೇರುತ್ತದೆ. ಇದು ಆಮದು ಮಾಡಿದ ಫಿಲ್ಟರ್‍ಗಳನ್ನು ಹೊಂದಿದೆ. ಇಂತಹ ಹಲವಾರು ಸ್ಥಾವರಗಳನ್ನು ಆರಂಭಿಸಲು ಕೇಂದ್ರ ನಿರ್ಧರಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries