HEALTH TIPS

ತನ್ನ ಈ ಒಂದು ಕೊನೆಯ ಬೇಡಿಕೆಯನ್ನು ಸ್ವೀಕರಿಸುವನೋ ಎಂದು ಗೊತ್ತಿಲ್ಲ: ಶಬರಿಮಲೆ ಮಹಿಳೆ ಪ್ರವೇಶ ಪ್ರಕರಣವನ್ನು ಶೀಘ್ರವೇ ಪರಿಗಣಿಸಬೇಕು ಎಂದು ಮಾಜಿ ತಂತ್ರಿಗಳ ಪತ್ನಿಯಿಂದ ಮುಖ್ಯ ನ್ಯಾಯಮೂರ್ತಿಗೆ ಪತ್ರ

 

            ನವದೆಹಲಿ: ಶಬರಿಮಲೆಗೆೆ ಮಹಿಳೆಯರ ಪ್ರವೇಶ ಪ್ರಕರಣವನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರಿಗೆ ಪತ್ರ ಕಳುಹಿಸಲಾಗಿದೆ. ಕೆಳಗಿನ ಮಠದ(ತಾಳೆ ಮಠಂ) ಮಾಜಿ ತಂತ್ರಿ ಕಂಠರರ್ ಮಹೇಶ್ವರ ಅವರ ಪತ್ನಿ ದೇವಕಿ ಅಂತರ್ಜನ ಅವರು ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಕಳುಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಭಕ್ತರ ಬೇಡಿಕೆಗೆ ಬೆಂಬಲ ನೀಡಿರುವುದಾಗಿ ದೇವಕಿ ಅಂತÀರ್ಜನ ಪತ್ರದಲ್ಲಿ ತಿಳಿಸಿದ್ದಾರೆ.

               ದೇವಕಿಯವರಿಗೆ ಅವರಿಗೆ ೮೭ ವರ್ಷ. ತನ್ನ ಬೇಡಿಕೆಯನ್ನು ಸ್ವೀಕರಿಸುವರೋ ಎಂದು ಗೊತ್ತಿಲ್ಲ. ಆದರೆ ಶಬರಿಮಲೆ ಅಯ್ಯಪ್ಪನಿಗೆ ಇದು ತನ್ನ ಕೊನೆಯ ಬೇಡಿಕೆ ಎಂದೂ ಪತ್ರದಲ್ಲಿ ತಿಳಿಸಲಾಗಿದೆ. ಶಬರಿಮಲೆ ಆಂದೋಲನದ ವೇಳೆ ಪೋಲೀಸರು ಬಂಧಿಸಿರುವ ತಮ್ಮ ಫೋಟೋವನ್ನೂ ದೇವಕಿ ಲಗತ್ತಿಸಿದ್ದಾರೆ. ಈ ಪ್ರಕರಣವನ್ನು ಸಾಂವಿಧಾನಿಕ ಪೀಠದಿಂದ ಪರಿಗಣಿಸುವಂತೆಯೂ ಪತ್ರದಲ್ಲಿ ಕೋರಲಾಗಿದೆ.

                ಶಬರಿಮಲೆ ಪ್ರಕರಣವು ಒಂಬತ್ತು ಸದಸ್ಯರ ಸಾಂವಿಧಾನಿಕ ಪೀಠದ ಮುಂದೆ ಜನವರಿ ೨೦೨೦ ರಲ್ಲಿ ವಿಚಾರಣೆಯನ್ನು ಪ್ರಾರಂಭಿಸಿತು ಆದರೆ ಪೂರ್ಣಗೊಳಿಸಲಾಗಲಿಲ್ಲ. ಈ ಪ್ರಕರಣದ ತೀರ್ಪು ಭಾರತೀಯ ನ್ಯಾಯಾಂಗದ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಎಂದು ಪತ್ರದಲ್ಲಿ ಹೇಳಲಾಗಿದೆ.

           ದೇವಸ್ವಂ ಮಂಡಳಿ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಗಳು, ರಿಟ್ ಅರ್ಜಿಗಳು ಮತ್ತು ವಿರಾಮ ಅರ್ಜಿಗಳನ್ನು ನ್ಯಾಯಾಲಯವು ಪರಿಗಣಿಸುತ್ತದೆ. ಎನ್‌ಎಸ್‌ಎಸ್ ಮತ್ತು ತಂತ್ರಿ ಸೇರಿದಂತೆ ಒಟ್ಟು ೫೬ ಮರುಪರಿಶೀಲನಾ ಅರ್ಜಿಗಳು ತೀರ್ಪನ್ನು ಪ್ರಶ್ನಿಸಿವೆ. ಅದರಲ್ಲಿ ದೇವಸ್ಥಾನ ಸಂರಕ್ಷಣಾ ಸಮಿತಿ ಸೇರಿದಂತೆ ಹಿಂದೂ ಸಂಘಟನೆಗಳೂ ಸೇರಿವೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries