ತಿರುವನಂತಪುರ: ರಾಜ್ಯಸಭಾ ಚುನಾವಣೆಗೆ ಯುಡಿಎಫ್ ತನ್ನ ಅಭ್ಯರ್ಥಿಯನ್ನು ಘೋಶಿಸಿದೆ. ಡಾ.ಶೂರನಾಡ್ ರಾಜಶೇಖರನ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಮಾಹಿತಿ ನೀಡಿದರು.
ಕೇರಳ ಕಾಂಗ್ರೆಸ್ ಎಂ ಅಧ್ಯಕ್ಷ ಜೋಸ್ ಕೆ ಮಣಿ ಎಲ್ ಡಿಎಫ್ ಅಭ್ಯರ್ಥಿಯಾಗಿದ್ದಾರೆ. ಅವರು ನಿನ್ನೆ ನಾಮಪತ್ರ ಸಲ್ಲಿಸಿದ್ದರು.
ಇದೇ ತಿಂಗಳ 29ರಂದು ಉಪಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದ್ದು, ನವೆಂಬರ್ 17 (ನಾಳೆ) ರಂದು ಪರಿಶೀಲನೆ ನಡೆಯಲಿದೆ. ಹಿಂಪಡೆಯಲು ಕೊನೆಯ ದಿನಾಂಕ 22 ಆಗಿದೆ. 29 ರಂದು ಮತದಾನ ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ನಡೆಯಲಿದೆ.