ಕಾಸರಗೋಡು: ರಾಜ್ಯ ಕುಟುಂಬಶ್ರೀ ಮಿಷನ್ ನೇತೃತ್ವದಲ್ಲಿ ರಚನೆ ನಡೆಸಲಾಗುವ ಆಕ್ಸಿಲರಿ ಗ್ರೂಪ್ ನ ಪ್ರಚಾರಾರ್ಥ ಕುಟುಂಬಶ್ರೀ ಜಿಲ್ಲಾ ಮಿಷನ್ ನ "ಯುವಾಗ್ನಿ" ಕಲಾಜಾಥಾ ಆರಂಭಗೊಂಡಿದೆ.
ಕಾಸರಗೋಡು ನೂತನ ಬಸ್ ನಿಲ್ದಾಣ ಬಳಿ ನಡೆದ ಸಮಾರಂಭದಲ್ಲಿ ಜಿಲ್ಲಾ ಮಿಷನ್ ಸಂಚಾಲಕ ಟಿ.ಟಿ.ಸುರೇಂದ್ರನ್, ಎ.ಡಿ.ಎಂ.ಸಿ.ಗಳಾದ ಡಿ.ಹರಿದಾಸ್, ಪ್ರಕಾಶನ್ ಪಾಲಾಯಿ, ಸಿ.ಎಚ್.ಇಕ್ಬಾಲ್, ಕುಟುಂಬಶ್ರೀ ಜಿಲ್ಲಾ ಮಿಷನ್ ಸಿಬ್ಬಂದಿ, ಉದಯನ್ ಕುಂಡಂಕುಳಿ ಮೊದಲಾದವರು ನೇತೃತ್ವ ವಹಿಸಿದ್ದರು.
ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲ ಡಾ.ಎಂ.ರಮಾ ಅವರಿಗೆ ಜಿಲ್ಲಾಧಿಕಾರಿ ಸ್ಮರಣಿಕೆ ಹಸ್ತಾಂತರಿಸಿದರು.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜು, ಉಪ್ಪಳ ಪೇಟೆ, ಕುಂಬಳೆ ಪೇಟೆ ಗಳಲ್ಲಿ ಮೊದಲ ದಿನದ ಪರ್ಯಟನೆ ನಡೆಯಿತು. ನ.16ರಂದು ಮುಳ್ಳೇರಿಯ ಪೆಟೆ, ಮುನ್ನಾಡು ಪೀಪಲ್ಸ್ ಪಯಾಸ್ ಕಾಲೇಜು, ರಾಜಪುರಂ, ಒಡೆಯಂಚಾಲ್ ಪೇಟೆ, ಚಿತ್ತಾರಿಕಲ್ಲ್ ಪೇಟೆಗಳಲ್ಲಿ ಪರ್ಯಟನೆ ನಡೆಯಲಿದೆ.
ನ.17ರಂದು ಪೆರಿಯ ಪೇಟೆ, ಕಾಞಂಗಾಡು ಮಿನಿ ಸಿವಿಲ್ ಸ್ಟೇಷನ್, ಪಡನ್ನಕ್ಕಾಡು, ನೀಲೇಶ್ವರ ಮಾರುಕಟ್ಟೆ ಮೊದಲಾದೆಡೆ ಪರ್ಯಟನೆ ನಡೆದು, ಚೆರುವತ್ತೂರು ಪೇಟೆಯಲ್ಲಿ ಸಮಾಪ್ತಿಗೊಳ್ಳಲಿದೆ.