HEALTH TIPS

ವಿಶ್ವ ಮಧುಮೇಹ ದಿನಾಚರಣೆ: ಐಎಂಎ ವತಿಯಿಂದ ಸಾಮೂಹಿಕ ನಡಿಗೆ, ವೆಬಿನಾರ್

                                                        

             ಕಾಸರಗೋಡು: ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಐಎಂಎ ಕಾಸರಗೋಡು ನಗರ ಸಮಿತಿ ವತಿಯಿಂದ ಸಾಮೂಹಿಕ ನಡಿಗೆ ಕಾರ್ಯಕ್ರಮ ಜರುಗಿತು. ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಿಂದ ಜನರಲ್ ಆಸ್ಪತ್ರೆ ವರೆಗೆ ಹಮ್ಮಿಕೊಳ್ಳಲಾದ ಸಾಮೂಹಿಕ ನಡಿಗೆಯಲ್ಲಿ ಮಕ್ಕಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. 

           ಹೊಸ ಬಸ್ ನಿಲ್ದಾಣ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎನ್.ಎ. ನೆಲ್ಲಿಕುನ್ನು ಸಾಮೂಹಿಕ ನಡಿಗೆಗೆ ಚಾಲನೆ ನೀಡಿದರು. ಡಾ. ಜನಾರ್ದನ ನಾಯ್ಕ್, ಡಾ. ಜಮಾಲ್ ಅಹಮ್ಮದ್, ಡಾ. ರೇಖಾ ಮಯ್ಯ, ಡಾ. ನಬೀಸಾ ಉಪಸ್ಥಿತರಿದ್ದರು. ಐಎಂಎ ಶಾಖಾ ಸಮಿತಿ ಅಧ್ಯಕ್ಷ ಡಾ.ಬಿ. ನಾರಾಯಣ ನಾಯ್ಕ್ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಕಾಸಿಂ ಟಿ. ವಂದಿಸಿದರು.

               ಈ ಸಂದರ್ಭ ಆಯೋಜಿಸಲಾಗಿದ್ದ ವೆಬಿನಾರ್‍ನಲ್ಲಿ 'ಮಧುಮೇಹ-ಹೊಸ ಚಿಕಿತ್ಸಾ ವಿಧಾನ'ಎಂಬ ವಿಷಯದ ಬಗ್ಗೆ ಖ್ಯಾತ ಡಯಾಬಟೊಲೊಜಿಸ್ಟ್ ಡಾ. ನಸೀರ್ ಅಹಮ್ಮದ್ ತರಗತಿ ನಡೆಸಿದರು. ಡಾ. ಕೃಷ್ಣ ನಾಯ್ಕ್, ಡಾ. ಅವಿನಾಶ್ ಉಪಸ್ಥಿತರಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries