ಪೆರ್ಲ : ಎಣ್ಮಕಜೆ ಪಂಚಾಯತಿ ಮಟ್ಟದ ಕಾಂಗ್ರೆಸ್ ಹೊಸ ಘಟಕವಾದ ಸಿಯುಸಿ ಯೂನಿಟ್ ಸಮಿತಿ ಪಂಚಾಯತು ಮಟ್ಟದ ಉದ್ಘಾಟನೆ ವಳಮುಗೇರ್ ನಲ್ಲಿ ನಡೆಯಿತು.
ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು. ಎಣ್ಮಕಜೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಗಾಂಭೀರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಿಯುಕ್ತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ಪ್ರಭು ಕುಂಬಳೆ, ಪ್ರಧಾನ ಕಾರ್ಯದರ್ಶಿ ವಿಲ್ಫ್ರೆಡ್ ಡಿಸೋಜ, ಯೂತ್ ಕಾಂಗ್ರೆಸ್ ಮಂಡಲಾಧ್ಯಕ್ಷ ನಿಸಾರ್ ಬಣ್ಪುತ್ತಡ್ಕ, ಪೃಥ್ವಿರಾಜ್ ಶೆಟ್ಟಿ, ಹ್ಯಾರಿಸ್ ವಳಮುಗೇರ್, ಅಬ್ದುಲ್ಲ ವಳಮುಗೇರ್, ಸಿಸಿಲಿಯಾ ಡಿಸೋಜ ಮೊದಲಾವರು ಪಾಲ್ಗೊಂಡಿದ್ದರು.
ಸಿಸಿಲಿಯಾ ಡಿಸೋಜ ಅವರನ್ನು ಯೂನಿಟ್ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಉಮ್ಮರ್ ಫಾರೂಕ್ ಸ್ವಾಗತಿಸಿ, ಲತೀಫ್ ವಂದಿಸಿದರು. ಮಂಜೇಶ್ವರ ಮಂಡಲದ ಪ್ರಪ್ರಥಮ ಸಿಯುಸಿ ಇದಾಗಿದೆ.