ಕುಂಬಳೆ: ಮೊಗ್ರಾಲ್ ಪುತ್ತೂರು ಬಳ್ಳೂರು ಬಯಲು ಸಮಿತಿಗೆ ಸೇರಿದ 10 ಎಕರೆ ಭತ್ತದ ಕಟಾವಿಗೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಕೈಜೋಡಿಸಿದರು. ಭತ್ತದ ಕಟಾವಿಗೆ ಕಾರ್ಮಿಕರ ಕೊರತೆಯಿಂದ ಕಳೆದ ಒಂದು ತಿಂಗಳಿನಿಂದ ಯುವ ಕೃಷಿಕ ರಘು ಅವರ ಬವಣೆ ಮನಗಂಡು ಪಕ್ಷದ ಕಾರ್ಯಕರ್ತರು ಕಟಾವಿಗೆ ಮುಂದಾಗಿದ್ದರು. ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಭತ್ತದ ಕಟಾವಿಗಾಗಿ ಗದ್ದೆಗೆ ತೆರಳಿದರು.
ಬಳ್ಳೂರ ನಾಡಿನ ದೊಡ್ಡ ಹಬ್ಬವಾಗಿ ಕೊಯ್ಲು ಉತ್ಸವ ನಡೆಯಿತು. ಈ ಸಂದರ್ಭ ಕೃಷಿಕ ರಘು ಹಾಗೂ ಕಾರ್ಮಿಕರಾದ ದೇವಕಿ, ಲೀಲಾ, ಪದ್ಮಾವತಿ, ವೇದಾವತಿ ಅವರನ್ನು ಪಕ್ಷದ ವತಿಯಿಂದ ಶಾಲು ಹಾಕಿ ಗೌರವಿಸಲಾಯಿತು. ಈ ಸಂದರ್ಭ ಬಿಜೆಪಿ ಪಂಚಾಯಿತಿ ಸಮಿತಿ ಅಧ್ಯಕ್ಷ ಯೋಗೇಶ್, ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷರಾದ ಸಂಪತ್ ಕುಮಾರ್, ಪಂಚಾಯಿತಿ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಮೀಳಾ ಮಜಲ್, ಚಂದ್ರಶೇಖರ, ಗ್ರಾಪಂ ಸದಸ್ಯೆ ಸುಲೋಚನಾ, ಲಕ್ಷ್ಮೀನಾರಾಯಣ, ಗೀತಾಬಾಲನ್ ಉಪಸ್ಥಿತರಿದ್ದರು.