HEALTH TIPS

ಚಾವಕ್ಕಾಡ್ ನಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ; ಕೃತ್ಯದ ಹಿಂದೆ ಎಸ್ ಡಿಪಿಐ ಎಂಬ ಶಂಕೆ: ಇಂದು ಬಿಜೆಪಿ ಹರತಾಳ

Top Post Ad

Click to join Samarasasudhi Official Whatsapp Group

Qries

                                           

        ಗುರುವಾಯೂರು: ಚಾವಕ್ಕಾಡ್ ಮಣತ್ತಲ ಚಪ್ಪರಂ ಎಂಬಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಮನತ್ತಳ ಕೊಪ್ಪರ ಮನೆಯ ಬಿಜು ಮೃತಪಟ್ಟವರು. ಚಾವಕ್ಕಾಡ್ ನಾಗಯಕ್ಷಿ ದೇವಸ್ಥಾನದ ಮೈದಾನದಲ್ಲಿ ಬಿಜು ವನ್ನು ಚಾಕುವಿನಿಂದ ಇರಿದು ಹತ್ಯೆಗೈಯ್ಯಲಾಗಿದೆ. ಎಸ್.ಡಿ.ಪಿ.ಐ ಕಾರ್ಯಕರ್ತರು ಹತ್ಯೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

                      ಮೂವರು ಶಂಕಿತರ ಮೇಲೆ ನಿಗಾ ಇರಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯನ್ನು ಪ್ರತಿಭಟಿಸಿ ಬಿಜೆಪಿ ಇಂದು(ಸೋಮವಾರ) ಚಾವಕ್ಕಾಡ್ ಪುರಸಭೆ ಮತ್ತು ಕಡಪ್ಪುರಂ ಪಂಚಾಯತ್ ವ್ಯಾಪ್ತಿಯಲ್ಲಿ ಹರತಾಳಕ್ಕೆ ಕರೆ ನೀಡಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಅಡ್ವ ಕೆ.ಕೆ.ಅನೀಶ್ ಕುಮಾರ್ ಈ ಬಗ್ಗೆ ತಿಳಿಸಿದ್ದಾರೆ. 

                ಘರ್ಷಣೆ ಇಲ್ಲದ ಪ್ರದೇಶದಲ್ಲಿ ಗಲಭೆ ಸೃಷ್ಟಿಸುವ ಹುನ್ನಾರ ಇದಾಗಿದ್ದು, ಈ ಹತ್ಯೆಯನ್ನು ಯೋಜಿಸಿ ನಡೆಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಹಿಂದೆ ಸಿಪಿಎಂ ಪಕ್ಷದಲ್ಲಿ ಕೆಲಸ ಮಾಡಿದ್ದ ಆರೋಪಿಗಳು ಇತ್ತೀಚೆಗೆ ಎಸ್ ಡಿಪಿಐ ಸೇರಿದ್ದರು.

                   ಈ ಘಟನೆಯಲ್ಲಿ ಸಿಪಿಎಂ ನಾಯಕತ್ವದ ಕೈವಾಡದ ಬಗ್ಗೆ ಅನುಮಾನವಿದೆ ಎಂದು ಬಿಜೆಪಿ ಹೇಳಿದೆ. ಘಟನೆಯಲ್ಲಿ ಭಾಗಿಯಾದ ಆರೋಪಿಗಳು ಹಾಗೂ ಷಡ್ಯಂತ್ರದಲ್ಲಿ ಭಾಗಿಯಾದವರನ್ನು ಪೋಲೀಸರು ಕೂಡಲೇ ಬಂಧಿಸಬೇಕು ಎಂದು ವಕೀಲ ಕೆ.ಕೆ.ಅನೀಶ್ ಕುಮಾರ್ ಆಗ್ರಹಿಸಿದರು.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries