ಮಧೂರು: ಕನ್ನಡ ಚಿತ್ರ ರಂಗದ ಪ್ರಸಿದ್ದ ನಟ ಪುನೀತ್ ರಾಜಕುಮಾರ್ ಅವರಿಗೆ ಕಾಸರಗೋಡು ರಂಗ ಕುಟೀರ ಪಾರೆಕಟ್ಟ ದಲ್ಲಿ ಭಾನುವಾರ ಜರುಗಿದ ಸವಾಕ್ ಕಾಸರಗೋಡು ವಲಯದ ಸಭೆಯಲ್ಲಿ ಸವಾಕ್ ಜಿಲ್ಲಾ ಅಧ್ಯಕ್ಷ ಉಮೇಶ್ ಸಾಲಿಯಾನ್ ತೀವ್ರಸಂತಾಪವನ್ನು ವ್ಯಕ್ತಪಡಿಸಿದರು. ಹಿರಿಯರಂಗನಟ ವಾಸು ಬಾಯಾರು ಅವರು ಪುನೀತ್ ರಾಜಕುಮಾರ್ ಅವರು ಚಿತ್ರರಂಗದ ಜೊತೆಗೆ ಸಮಾಜಿಕವಾಗಿಯೂ ಬಹಳಷ್ಟು ನೆರವಾಗಿ ಉತ್ತುಂಗ ಪಥದಲ್ಲಿರುವಾಗಲೇ ಪರಲೋಕಸೇರಿ ಕನ್ನಡಿಗರನ್ನು ದು:ಖದಲ್ಲಿ ಮುಳುಗಿಸಿದ್ದಾರೆ. ಅವರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲೆಂದು ಪ್ರಾರ್ಥಿಸುತ್ತಾ ಶ್ರದ್ದಾಂಜಲಿ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಸವಾಕ್ ಕಾಸರಗೋಡು ವಲಯಾಧ್ಯಕ್ಷ ದಯಾಪ್ರಸಾದ್ ಪಿಲಿಕುಂಜೆ ಅಧ್ಯಕ್ಷತೆ ವಹಿಸಿದ್ದರು. ಈಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಶ್ರೇಷ್ಠ ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ ಮತ್ತು ದೈವನರ್ತಕ ಸೂರಜ್ ಪಣಿಕ್ಕರ್ ಅವರಿಗೂ ನುಡಿನಮನ ಸಲ್ಲಿಸಲಾಯಿತು.
ಹಿರಿಯ ಯಕ್ಷಗಾನಕಲಾವಿದರಾದ ಅಪ್ಪಕುಂಞÂ ಮಣಿಯಾಣಿ ಭಾಗವತರ ಸಾಧನೆಯ ಬಗ್ಗೆ ಮಾತಾಡಿದರು. ಸಭೆಯಲ್ಲಿ ಸನ್ನಿ ಅಗಸ್ಟಿಯನ್, ನರೇಂದ್ರ ಪಿಲಿಕುಂಜೆ, ದಿವಾಕರ ಕಾಸರಗೋಡು, ವನಜ ಗಂಗಾಧರ್, ಭಾರತಿಬಾಬು,ಜಾಹ್ನವಿ ಟೀಚರ್, ಜಯಶ್ರೀ ದಿವಾಕರ್, ಪ್ರಸನ್ನ, ಮುಕುಂದರಾಜ್ ಮಲ್ಲ, ಶೇಖರ್ ಬೇಕಲ್, ಜಯಶ್ರೀ ಕಾರಡ್ಕ, ಸುಜಾತ ಕಲಾಕ್ಷೇತ್ರ ಮೊದಲಾದವರು ಉಪಸ್ಥಿತರಿದ್ದು ನುಡಿನಮನ ಸಲ್ಲಿಸಿದರು. ಸವಾಕ್ ಕಾಸರಗೋಡು ವಲಯದ ಸಮಾವೇಶ ಹಾಗು ಜಿಲ್ಲಾ ವನಿತಾ ಸಮಾವೇಶ ಡಿಸಂಬರು 12 ರಂದು ಕಾಸರಗೋಡು ಮುನ್ಸಿಪಲ್ ಕಾನ್ಪರೆನ್ಸ್ ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಯಿತು. ಅಂದು ಹತ್ತನೇ ತರಗತಿ ಮತ್ತು ಪ್ಲಸ್ ಟು ತರಗತಿಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ಸವಾಕ್ ಸಂಘಟನೆಯ ಸದಸ್ಯರ ಮಕ್ಕಳನ್ನು ಗೌರವಿಸುವುದು ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.