HEALTH TIPS

ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲು ಎಂಜಿ ವಿಶ್ವವಿದ್ಯಾನಿಲಯ ನಿರ್ಮಿಸಿದ ಸಾಕ್ಷ್ಯಚಿತ್ರವನ್ನು ತಡೆಹಿಡಿದಿದ್ದ ಕೆಟಿ ಜಲೀಲ್: ಉನ್ನತ ಶಿಕ್ಷಣದಲ್ಲಿ ದುರಾಡಳಿತ ಮತ್ತಷ್ಟು ಬಹಿರಂಗ


       ಕೊಟ್ಟಾಯಂ: ಕಳೆದ ಅವಧಿಯ  ಪಿಣರಾಯಿ ಸರ್ಕಾರದ ಸಂದರ್ಭ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಎಡಪಕ್ಷಗಳ ದಿಕ್ಕು ತಪ್ಪಿದ ಹಸ್ತಕ್ಷೇಪಗಳ ಕುರಿತು ಇನ್ನಷ್ಟು ವಿಷಯಗಳು ಬಹಿರಂಗವಾಗುತ್ತಿವೆ.  ಎಂಜಿ ವಿಶ್ವವಿದ್ಯಾನಿಲಯವು ಮಾದಕ ವ್ಯಸನದ ಕುರಿತು 60 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಿದ್ದ ಜಾಗೃತಿ  ಸಾಕ್ಷ್ಯಚಿತ್ರವನ್ನು ಅಂದಿನ ಉನ್ನತ ಶಿಕ್ಷಣ ಸಚಿವರಾಗಿದ್ದ ಜಲೀಲ್ ಅವರ ಹಠ ಹಾಗೂ ನಿರ್ಲಕ್ಷ್ಯದ ಕಾರಣ ಬಿಡುಗಡೆಗೊಳಿಸಲಾಗಿಲ್ಲ ಎಂದು ತಿಳಿಯಲಾಗಿದೆ.  ಮಾಜಿ ರಿಜಿಸ್ಟ್ರಾರ್ ಹಾಗೂ ಸಾಕ್ಷ್ಯಚಿತ್ರ ನಿರ್ದೇಶಕ ಎಂ.ಆರ್.ಉಣ್ಣಿ ಜಲೀಲ್ ಈ ಬಗ್ಗೆ ಜಲೀಲ್  ವಿರುದ್ಧ ಹರಿಹಾಯ್ದಿದ್ದಾರೆ.
          ಪ್ರತಿನಿತ್ಯ ವಿಶ್ವವಿದ್ಯಾನಿಲಯ ವ್ಯವಹಾರಗಳಲ್ಲಿ ಮೂಗು ತೂರಿಸುತ್ತಿದ್ದ ಜಲೀಲ್ ಅವರು ಉಪಕುಲಪತಿಗಳ ಅಧಿಕಾರ ಮೀರಿ ಹಲವು ಕೆಲಸಗಳನ್ನು ಮಾಡಿದ್ದಾರೆ ಎಂಬ ಆರೋಪ ಬಲವಾಗಿತ್ತು.  ಈ ಹಿಂದೆ ಜಲೀಲ್ ವಿರುದ್ಧ ಅಂಕ ನೀಡುವಿಕೆ ಬಗೆಗಿನ ವಿವಾದ ಹಾಗೂ ಅಕ್ರಮ ನೇಮಕಾತಿ ಆರೋಪ ಕೇಳಿಬಂದಿತ್ತು.  ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜಲೀಲ್ ಅವರ ದುರ್ವರ್ತನೆ ವಿರುದ್ಧ ರಿಜಿಸ್ಟ್ರಾರ್ ಹೇಳಿಕೆ ನೀಡಿದ್ದಾರೆ.  ಮಾದಕ ದ್ರವ್ಯ ಮತ್ತು ಮದ್ಯಪಾನದ ವಿರುದ್ಧ ಜಾಗೃತಿ ಮೂಡಿಸಲು ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯದ 60 ಲಕ್ಷ ರೂಪಾಯಿ ವೆಚ್ಚದ ‘ಟ್ರಿಪ್’ ಸಿನಿಮಾ ನಿರ್ಮಾಣಗೊಂಡು ಬಳಿಕ ಅದು ಕಸದ ತೊಟ್ಟಿ ಸೇರಿತು  ಎಂಬ ಆರೋಪಗಳು ಈಗ ಜಲೀಲ್ ವಿರುದ್ಧ ಕೇಳಿಬರುತ್ತಿವೆ.  ರವೀಂದ್ರನಾಥ್ ಅವರು ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ಸಮಕ್ಷಂ ಎಂಬ ಸಾಕ್ಷ್ಯಚಿತ್ರವನ್ನು ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಪ್ರದರ್ಶಿಸಲಾಗಿತ್ತು.  ಇದನ್ನು ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯ ನಿರ್ಮಿಸಿತ್ತು.
       ಜಾಗೃತಿ ಸಾಕ್ಷ್ಯಚಿತ್ರ ವಿಭಾಗದಲ್ಲಿ ಜಲೀಲ್ ಡ್ರಗ್ಸ್ ವಿಚಾರದಲ್ಲಿ ಇಷ್ಟು ಬೇಗ ಮಧ್ಯಪ್ರವೇಶಿಸಿರುವುದು ಭಾರೀ ಅನುಮಾನಕ್ಕೆ ಕಾರಣವಾಗಿದೆ.  ಸಚಿವರ ಹಿಂದೆ ಯಾರ ಒತ್ತಡವಿದೆ ಎಂಬುದನ್ನು ಪತ್ತೆ ಮಾಡಬೇಕಿದೆ.  ಯುವ ಪೀಳಿಗೆಯ ಮಾದಕ ಔಷಧಗಳ ಸೇವನೆ ಸಮಸ್ಯೆಯನ್ನು ಕ್ಯಾಂಪಸ್‌ಗಳನ್ನು ಹೊರತುಪಡಿಸಿ ಎಲ್ಲಿ ತೋರಿಸಲಾಗುತ್ತದೆ ಎಂದು ಉಣ್ಣಿ ಕೇಳುತ್ತಾರೆ.
       ಮಾದಕ ದ್ರವ್ಯದ ವಿರುದ್ಧ ಪ್ರಬಲ ಜಾಗೃತಿ ಅಭಿಯಾನದ ಭಾಗವಾಗಿ ನಿರ್ಮಿಸಲಾದ ಸಾಕ್ಷ್ಯಚಿತ್ರವನ್ನು ಕಾಲೇಜುಗಳಲ್ಲಿ ತೋರಿಸುವುದನ್ನು ಜಲೀಲ್ ತೀವ್ರವಾಗಿ ವಿರೋಧಿಸಿದ್ದರು.  ಇದಕ್ಕಾಗಿ ಅಧಿಕಾರಿಗಳ ಮಟ್ಟದಲ್ಲಿ ಹಲವು ವಿಚಾರಣೆಗಳು ಮತ್ತು ಬೆದರಿಕೆಗಳು ಬಂದಿವೆ ಎಂದು ಉಣ್ಣಿ ಹೇಳುತ್ತಾರೆ.  ರಿಜಿಸ್ಟ್ರಾರ್ ಪ್ರಕಾರ, ಜಲೀಲ್ ಅವರ ಕಠೋರತೆ ಮತ್ತು ಬೆದರಿಕೆಯಿಂದ ಯಾವುದೇ ಕಾಲೇಜಿನಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಲಿಲ್ಲ.
      ಶಿಕ್ಷಣ ಕ್ಷೇತ್ರದಲ್ಲಿ ಜ್ಞಾನವೇ ಇಲ್ಲದ ಮಂತ್ರಿಗಳು, ಅಧಿಕಾರಶಾಹಿಗಳಿದ್ದರೆ ಇದನ್ನೆಲ್ಲ ಸಹಿಸಿಕೊಳ್ಳಬೇಕಾಗುತ್ತದೆ.  ವಿಶ್ವವಿದ್ಯಾನಿಲಯದ ದಿನನಿತ್ಯದ ವ್ಯವಹಾರಗಳಲ್ಲಿ ವಿವಿಯ ಅನೇಕರು ಸಚಿವರ ಹೆಸರಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಅಧಿಕಾರಿಗಳು ಹಾಗೂ ಶಿಕ್ಷಕರಿಗೆ ಬಹಳ ತೊಂದರೆಯಾಗಿದೆ ಎಂದು ಉಣ್ಣಿ ಹೇಳಿದರು.  ರಾಜ್ಯಪಾಲರು ವಿಶ್ವವಿದ್ಯಾನಿಲಯ ಹಾಗೂ ಮುಖ್ಯಮಂತ್ರಿಗಳೊಂದಿಗೆ ನೇರ ಹಣಾಹಣಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಅಧಿಕಾರಿಗಳ ಕಮ್ಯುನಿಸ್ಟ್ ಸಚಿವರ ವಿರುದ್ಧ ಹರಿಹಾಯುವಿಕೆ ಗಮನಾರ್ಹವಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries