HEALTH TIPS

ರಸ್ತೆ ದುರಸ್ತಿ ಗೊತ್ತಿಲ್ಲದ ಎಂಜಿನಿಯರ್ ಗಳು ಯಾಕೆ ಬೇಕು?: ನಿಮ್ಮನ್ನು ಮೇಸ್ತ್ರಿಗಳೆಂದು ಕರೆಯಲೂ ಅಸಾಧ್ಯ!: ಹೈಕೋರ್ಟ್ ನಿಂದ ಮತ್ತೆ ಟೀಕೆ

Top Post Ad

Click to join Samarasasudhi Official Whatsapp Group

Qries

                                     

                   ಕೊಚ್ಚಿ: ರಾಜ್ಯದಲ್ಲಿ ರಸ್ತೆಗಳನ್ನು ಹಾಳು ಮಾಡಿರುವ ಎಂಜಿನಿಯರ್ ಗಳನ್ನು ಹೈಕೋರ್ಟ್ ಮತ್ತೊಮ್ಮೆ ಟೀಕಿಸಿದೆ. ರಸ್ತೆ ದುರಸ್ತಿ ಮಾಡುವುದು ಎಂಜಿನಿಯರ್ ಗಳಿಗೆ ಏಕೆ ಗೊತ್ತಿಲ್ಲ ಎಂದು ಹೈಕೋರ್ಟ್ ಟೀಕಿಸಿದೆ. ರಸ್ತೆ ಕುಸಿಯುವವರೆಗೂ ಎಂಜಿನಿಯರ್‍ಗಳು ಎಲ್ಲಿರುತ್ತಾರೆ, ನಿಮ್ಮನ್ನು ಎಂಜಿನಿಯರ್ ಎಂದು ಕರೆಯಬೇಡಿ, ಮೇಸ್ತ್ರಿ ಎಂದು ಕರೆಯಲೂ ಸಾಧ್ಯವಿಲ್ಲ ಎಂದು ನ್ಯಾಯಾಲಯ ಟೀಕಿಸಿದೆ.

                 ರಸ್ತೆಗಳ ದುಸ್ಥಿತಿಗೆ ಸಂಬಂಧಿಸಿದ ಪ್ರಕರಣವನ್ನು ಪರಿಗಣಿಸುವಾಗ ಹೈಕೋರ್ಟ್ ಟೀಕೆ ವ್ಯಕ್ತಪಡಿಸಿದೆ.  ರಸ್ತೆಗಳನ್ನು ಹಾಳು ಮಾಡಿದ ಆರೋಪದಲ್ಲಿ ಎಂಜಿನಿಯರ್‍ಗಳು ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿದೆ. ಇಂಜಿನಿಯರ್‍ಗಳಿಗೆ ತಿಳಿಯದೆ ಭ್ರಷ್ಟಾಚಾರ ನಡೆಯುವುದಿಲ್ಲ. ರಸ್ತೆ ನಿರ್ಮಾಣಕ್ಕೆ 100 ರೂಪಾಯಿ ಖರ್ಚು ಮಾಡಬೇಕಾದಲ್ಲಿ ಕನಿಷ್ಠ 50 ರೂಪಾಯಿಯನ್ನಾದರೂ ಏಕೆ ಖರ್ಚು ಮಾಡಬಾರದು ಎಂದೂ ಕೋರ್ಟ್ ಕೇಳಿದೆ. ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಈ ಬಗ್ಗೆ ಟೀಕಿಸಿದ್ದಾರೆ. 

                   ಮಲೇಷಿಯಾದ ಇಂಜಿನಿಯರ್ ನಿರ್ಮಿಸಿದ ಪಾಲಕ್ಕಾಡ್-ಒಟ್ಟಪಾಲಂ ರಸ್ತೆಗಳು ಇನ್ನೂ ಸುಸ್ಥಿತಿಯಲ್ಲಿವೆ ಎಂದು ಕೋರ್ಟ್ ಬೊಟ್ಟುಮಾಡಿತು. ರಸ್ತೆಗಳ ಕುರಿತ ದೂರುಗಳ ಬಗ್ಗೆ ಜನರಿಗೆ ನೇರವಾಗಿ ತಿಳಿಸಲು ನ್ಯಾಯಾಲಯ ಅವಕಾಶ ಕಲ್ಪಿಸಿತ್ತು. ರಾಜ್ಯದ 49 ರಸ್ತೆಗಳ ಬಗ್ಗೆ ಜನರು ದೂರು ನೀಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

                ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರು ಸರ್ಕಾರಿ ವಕೀಲರಿಗೆ ಎಲ್ಲಾ ದೂರಿನ ಪತ್ರಗಳನ್ನು ತೋರಿಸಿದರು. ಇಂಜಿನಿಯರ್, ಗುತ್ತಿಗೆದಾರರ ಬಗ್ಗೆ ದೂರುವವರಿದ್ದಾರೆ. ಕಿಳಕ್ಕಂಬಳಂ-ನೆಲ್ಲರ್ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಬೇಕು. ಇಲ್ಲದಿದ್ದರೆ ಸೋಮವಾರ ನೇರವಾಗಿ ರಸ್ತೆ ನಿರ್ಮಿಸಿದ ಎಂಜಿನಿಯರ್‍ಗೆ ಸಮನ್ಸ್ ಕಳಿಸಲಾಗುವುದು ಎಂದು ಹೈಕೋರ್ಟ್ ಹೇಳಿದೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries