HEALTH TIPS

ಕುತೂಹಲ ಕೆರಳಿಸಿದ ಉಮಾಭಾರತಿ-ನಿಶ್ಚಲಾನಂದ ಸರಸ್ವತಿ ಭೇಟಿ

Top Post Ad

Click to join Samarasasudhi Official Whatsapp Group

Qries

     ಭುವನೇಶ್ವರ: ಬಿಜೆಪಿ ಹಿರಿಯ ನಾಯಕಿ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಭಾನುವಾರ ಪುರಿ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಅವರನ್ನು ಭೇಟಿ ಮಾಡಿದ್ದು, ಇಬ್ಬರ ಈ ಭೇಟಿ ಹಲವರಲ್ಲಿ ಕುತೂಹಲವನ್ನು ಮೂಡಿಸಿದೆ.

     ಕೋವಿಡ್​ ​ಹಿನ್ನೆಲೆ ಪುರಾತನ ಜಗನ್ನಾಥ ದೇವಾಲಯಕ್ಕೆ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿತ್ತು . ಈ ಹಿನ್ನೆಲೆ ಉಮಾ ಭಾರತಿ ಪುರಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಭಾನುವಾರ ದೇಗುಲಕ್ಕೆ ಭೇಟಿ ನೀಡುವ ಮುನ್ನ ಅವರು ಸಿಂಹದ್ವಾರದ ಬಳಿ ದೇವಾಲಯದ ಹೊರಗಿನಿಂದ ಪತಿತಪಾಬನ (ಜಗನ್ನಾಥನ ಪ್ರತಿರೂಪ) ದರ್ಶನ ಪಡೆದರು.

     ಉಮಾ ಭಾರತಿ ಹಾಗೂ ನಿಶ್ಚಲಾನಂದ ಸರಸ್ವತಿ ಭೇಟಿವೇಳೆ ಯಾವ ವಿಷಯ ಬಗ್ಗೆ ಚರ್ಚೆ ನಡೆಸಿದರು ಎಂಬ ಕುರಿತು ಯಾವುದೇ ಮಾಹಿತಿ ಇಲ್ಲ.

     ಐದು  ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮುನ್ನ ಉಮಾ ಭಾರತಿ ಅವರು ನಿಶ್ಚಲಾನಂದ ಸರಸ್ವತಿ ಅವರ ಭೇಟಿ ಮಾಡಿರುವುದು ತೀವ್ರ ಕುತೂಹಲ ಕೆರಳಿಸಿದೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries