HEALTH TIPS

ಇಂದು ನಿರ್ಲಕ್ಷಿಸುವ ರೋಗಗಳು ನಾಳೆ ಮಹಾಮಾರಿಗಳಾಗಬಹುದು: ಭಾರತ್ ಬಯೋಟೆಕ್ ಮುಖ್ಯಸ್ಥ

            ನವದೆಹಲಿ: ನಾವು ಇಂದು ನಿರ್ಲಕ್ಷಿಸುವ ರೋಗಗಳು ಮುಂದಿನ ದಿನಗಳಲ್ಲಿ ಸಾಂಕ್ರಾಮಿಕಗಳಾಗಬಹುದು ಎಂದು ಭಾರತ್‌ ಬಯೋಟೆಕ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ನ ಮುಖ್ಯಸ್ಥ ಡಾ. ಕೃಷ್ಣ ಎಲ್ಲ ಅವರು ಸೋಮವಾರ ಎಚ್ಚರಿಸಿದ್ದಾರೆ.

           ಚಂಡೀಗಡದಲ್ಲಿರುವ‌ ಸೂಕ್ಷ್ಮಜೀವಿ ತಂತ್ರಜ್ಞಾನ ಸಂಸ್ಥೆಯ (ಐಎಂಟೆಕ್) 38ನೇ ಸಂಸ್ಥಾಪನಾ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


        'ಸಾಂಕ್ರಾಮಿಕ ಸನ್ನಿವೇಶದಲ್ಲಿ ನಾವಿನ್ಯತೆ ಮತ್ತು ನಾಯಕತ್ವ' ವಿಷಯ ಕುರಿತು ವರ್ಚುವಲ್‌ ಉಪನ್ಯಾಸ ನೀಡಿದ ಕೃಷ್ಣ, ನಾವು ಇಂದು ನಿರ್ಲಕ್ಷಿಸುವ ರೋಗಗಳು ಮುಂದಿನ ದಿನಗಳಲ್ಲಿ ಜಾಗತಿಕ ಸಾಂಕ್ರಾಮಿಕಗಳಾಗಬಹುದು. ಅವುಗಳ ವಿರುದ್ಧ ಹೋರಾಟ ನಡೆಸಲು ಸೂಕ್ತ ಯೋಜನೆ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.

              ಭಾರತ್ ಬಯೋಟೆಕ್‌ ಅಭಿವೃದ್ಧಿಪಡಿಸಿದ 'ಕೋವಾಕ್ಸಿನ್', ಭಾರತದ ಮೊದಲ ದೇಶೀಯ ಕೋವಿಡ್ ತಡೆ ಲಸಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜಗತ್ತಿನಾದ್ಯಂತ ಹೆಚ್ಚಿನ ಜನರಿಗೆ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.

             ಮುಂದುವರಿದು, ಸಾಂಕ್ರಾಮಿಕ ರೋಗಗಳಿಂದ ಉಂಟಾದ ಸಾರ್ವಜನಿಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಲಸಿಕೆ ಅಭಿವೃದ್ಧಿಯಲ್ಲಿ ನವೀನ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅತ್ಯಗತ್ಯ. ಭಾರತೀಯ ಔಷಧ ಕಂಪೆನಿಗಳು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು‌ ನವೀನ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಒತ್ತಿ ಹೇಳಿದ್ದಾರೆ.

ಐಎಂಟೆಕ್ ಅನ್ನು 1984ರಲ್ಲಿ ಸ್ಥಾಪಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries