HEALTH TIPS

ಜೋಡುಕಲ್ಲಲ್ಲಿ ಯಕ್ಷಗಾನ ಅಕಾಡೆಮಿ ಹಾಗೂ ಯಕ್ಷಕೂಟ ಪೊನ್ನೆತ್ತೋಡು ಜಂಟಿ ಕಾರ್ಯಕ್ರಮ: ಹಿರಿಯರ ನೆನಪು ಕಿರಿಯರಿಗೆ ಪ್ರೇರಣೆ- ಯೋಗೀಶ್ ರಾವ್ ಚಿಗುರುಪಾದೆ

     

                      ಉಪ್ಪಳ: ಕಲಾಕ್ಷೇತ್ರಗಳಲ್ಲಿ ಗತಿಸಿ ಹೋದ ಕಲಾವಿದರ ಸಾಧನೆಗಳನ್ನು ಅವಲೋಕಿಸುವುದುರಿಂದ ಕಿರಿಯ ಕಲಾವಿದರಿಗೆ ಸ್ಫೂರ್ತಿ ದೊರೆಯುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ  ಯೋಗೀಶ ರಾವ್ ಚಿಗುರುಪಾದೆ ಹೇಳಿದರು.

                ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ, ಮಹಿಳಾ ಯಕ್ಷಕೂಟ ಪೆÇನ್ನೆತ್ತೋಡು ಕಯ್ಯಾರು, ಇವರ ಆಶ್ರಯದಲ್ಲಿ ಜೋಡುಕಲ್ಲಿನಲ್ಲಿ ಜರಗಿದ 'ಹಿರಿಯರ ನೆನಪು' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

              ಕೇಶವ ಶಿಶುಮಂದಿರದ ಸಂಚಾಲಕ ಸದಾನಂದ ಕೊಮ್ಮ0ಡೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಯಾಗಿ, ನ್ಯಾಯವಾದಿ ಎಂ. ದಾಮೋದರ ಶೆಟ್ಟಿ ಹಾಗೂ ಆದಿನಾರಾಯಣ ಭಟ್ ಪಾಲ್ಗೊಂಡರು. ಯಕ್ಷಗಾನ ಕಲಾವಿದ  ಚಂದ್ರಹಾಸ ಕಯ್ಯಾರು ಅವರು ಅಗಲಿದ ಹಿರಿಯ ಕಲಾವಿದ ದಿ. ರಾಘವ ಪುರುಷ ಜೋಡುಕಲ್ಲು ಇವರ ಸಂಸ್ಮರಣೆಗೈದು ಮಾತನಾಡಿದರು.  ಸುನಿತಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಹಿಳಾ ಯಕ್ಷಕೂಟದ ಸದಸ್ಯರಿಂದ 'ಕೃಷ್ಣಸಂಧಾನ' ಎಂಬ ಯಕ್ಷಗಾನ ತಾಳಮದ್ದಳೆ ಜರಗಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries