HEALTH TIPS

ಮುಲ್ಲಪ್ಪೆರಿಯಾರ್‌ ಅಣೆಕಟ್ಟು ಸುರಕ್ಷತೆ ಮರುಪರಿಶೀಲನೆ ಅಗತ್ಯ: ಸುಪ್ರೀಂಗೆ ಮಾಹಿತಿ

             ನವದೆಹಲಿ: 126 ವರ್ಷ ಹಳೆಯದಾದ ಕೇರಳದ ಮುಲ್ಲಪ್ಪೆರಿಯಾರ್‌ ಅಣೆಕಟ್ಟಿನ ಸುರಕ್ಷತೆ ಕುರಿತಂತೆ ಹೊಸದಾಗಿ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಮತ್ತು ಮೇಲ್ವಿಚಾರಣಾ ಸಮಿತಿಯು ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿತು.

            ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಪೆರಿಯಾರ್‌ ನದಿಗೆ ಅಡ್ಡಲಾಗಿ 1985ರಲ್ಲಿ ಅಣೆಕಟ್ಟು ನಿರ್ಮಿಸಲಾಗಿದೆ. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ವಸ್ತುಸ್ಥಿತಿ ವರದಿಯಲ್ಲಿ ಸಿಡಬ್ಲ್ಯುಸಿ ಮತ್ತು ಮೇಲ್ವಿಚಾರಣಾ ಸಮಿತಿಯು, ಸುಪ್ರೀಂ ಕೋರ್ಟ್‌ 2010ರಲ್ಲಿ ನೀಡಿದ ನಿರ್ದೇಶನದಂತೆ ರಚನೆಯಾಗಿದ್ದ ಉನ್ನತಾಧಿಕಾರ ಸಮಿತಿಯು ಅಣೆಕಟ್ಟೆಯ ಸುರಕ್ಷತೆ ಕುರಿತು 2010 ರಿಂದ 2012ರವರೆಗೆ ಪರಿಶೀಲನೆ ನಡೆಸಿದೆ ಎಂದು ಮಾಹಿತಿ ನೀಡಿತು.

             ವಿವಿಧ ರಾಷ್ಟ್ರೀಯ ಸಂಸ್ಥೆಗಳು ಮತ್ತು ಪರಿಣತರ ಸಂಸ್ಥೆಗಳ ವರದಿ ಆಧರಿಸಿ ಉನ್ನತಾಧಿಕಾರಿ ಸಮಿತಿಯು, ಎಲ್ಲ ರೀತಿಯಲ್ಲಿಯೂ ಮುಲ್ಲಪ್ಪೆರಿಯಾರ್‌ ಅಣೆಕಟ್ಟು ಸುರಕ್ಷಿತವಾಗಿದೆ ಎಂಬ ತೀರ್ಮಾನಕ್ಕೆ ಬಂದಿದೆ ಎಂದು ತಿಳಿಸಿತು. ಉನ್ನತಾಧಿಕಾರ ಸಮಿತಿಯು ಇದುವರೆಗೂ 14 ಸಭೆ ನಡೆಸಿದೆ ಎಂದು ಮಾಹಿತಿ ನೀಡಿತು.

          ಆದಾಗ್ಯೂ, ಅಣೆಕಟ್ಟಿನ ಸುರಕ್ಷತೆ ಕುರಿತಂತೆ ಈಗ ಮತ್ತೊಮ್ಮೆ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ತಿಳಿಸಿತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries