HEALTH TIPS

ಶಿಕ್ಷಣದಲ್ಲಿ ಶೇ.18ರಷ್ಟು ಹೆಚ್ಚಳ ಒಳ್ಳೆಯದೇ: ಸಾಮಾನ್ಯ ಜನರನ್ನು ಗೇಲಿ ಮಾಡುವ ಬಜೆಟ್ ಇದಾಗಿದೆ: ಥಾಮಸ್ ಐಸಾಕ್

               ತಿರುವನಂತಪುರ; ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ನ್ನು ಮಾಜಿ ವಿತ್ತ ಸಚಿವ ಟಿಎಂ ಥಾಮಸ್ ಐಸಾಕ್ ಟೀಕಿಸಿದ್ದಾರೆ. ಬಜೆಟ್ ಜನಸಾಮಾನ್ಯರನ್ನು ಅಣಕಿಸುವಂತಿದ್ದು, ಈ ರೀತಿ ಜನರನ್ನು ಕಡೆಗಣಿಸುವ ಕೆಲವು ಘೋಷಣೆಗಳು ಇವೆ ಎಂದು ಥಾಮಸ್ ಐಸಾಕ್ ಹೇಳಿದ್ದಾರೆ. ಕೊರೋನಾದಿಂದ ಬಡವರು ಬಡವರಾಗಿಯೇ ಒಳಗಾಗುತ್ತಾರೆ ಎಮದರು. ಬಜೆಟ್ ನಲ್ಲಿ ಬಡವರನ್ನು ಕಡೆಗಣಿಸಲಾಗಿದೆ. ಕೇಂದ್ರ ಸಚಿವರು ಹೇಳಿದ್ದು ಸುಳ್ಳಲ್ಲ ಎಂದು ಥಾಮಸ್ ಐಸಾಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

                ಉದ್ಯೋಗ ಖಾತ್ರಿ ಯೋಜನೆಗೆ ಮೀಸಲಿಟ್ಟಿರುವ ಮೊತ್ತ ಕಳೆದ ಬಾರಿಗಿಂತ ಕಡಿಮೆಯಾಗಿದೆ. ಹಣದುಬ್ಬರ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಜೆಟ್ ಆರ್ಥಿಕ ಅಸಮಾನತೆಗೆ ಪರಿಹಾರವಲ್ಲ. ಕೇರಳದಲ್ಲಿ ಜಿಎಸ್‍ಟಿ ಆದಾಯ ಹೆಚ್ಚಾಗಿದೆ. ಇದೇ ವೇಳೆ ಶಿಕ್ಷಣ ಕ್ಷೇತ್ರದಲ್ಲಿ ಶೇ.18ರಷ್ಟು ಹೆಚ್ಚಳವಾಗಿರುವುದರಿಂದ ಅನುಕೂಲವಾಗಲಿದೆ ಎಂದರು.

                  ಜಾಗತಿಕವಾಗಿ ಹರಡುತ್ತಿರುವ ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಹಲವಾರು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ಎಲ್ಲ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಹಣದುಬ್ಬರವು ಆರರ ಆಸುಪಾಸಿನಲ್ಲಿದೆ. ಆದರೆ ಅದು ಎರಡಂಕಿಗೆ ಹೋಗದಂತೆ ನೋಡಿಕೊಳ್ಳಲು ಕೇಂದ್ರ ಕ್ರಮ ಕೈಗೊಳ್ಳುತ್ತಿದೆ. ಆದರೆ 2014ರ ಮೊದಲು ಇದು 10, 11, 12 ಮತ್ತು 13 ಆಗಿತ್ತು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

                ಆತ್ಮನಿರ್ಭರ್ ಭಾರತ್ ಯೋಜನೆಯು 60 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಒದಗಿಸಲಿದೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. 14 ವಲಯಗಳಲ್ಲಿನ ಯೋಜನೆಗಳು 60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತವೆ. 30 ಲಕ್ಷ ಕೋಟಿ ಹೆಚ್ಚುವರಿ ಉತ್ಪಾದನೆಗೆ ಇದು ದಾರಿ ಮಾಡಿಕೊಡುತ್ತಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries