HEALTH TIPS

ನಗರಸಭಾ ಮೀನುಮಾರುಕಟ್ಟೆಯಲ್ಲಿ ಆಹಾರ ಸುರಕ್ಷಾ ಅಧಿಕಾರಿಗಳಿಂದ ತಪಾಸಣೆ

             ಕಾಸರಗೋಡು: ಮೀನನ್ನು ದೀರ್ಘ ಕಾಲ ಕೆಡದಂತೆ ಸಂರಕ್ಷಿಸಿಡಲು ವಿಷಯುಕ್ತ ರಾಸಾಯನಿಕ ಬಳಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಕಾಸರಗೋಡು ನಗರಸಭಾ ಮೀನುಮಾರುಕಟ್ಟೆಯಲ್ಲಿ ಆಹಾರ ಸುರಕ್ಷಾ ವಿಭಾಗದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.

              ಹಸಿ ಮೀನನ್ನು ಹೆಚ್ಚು ಸಮಯ ಹಾಳಾಗದಂತೆ ಕೆಲವೊಂದು ವಿಷಯುಕ್ತ ರಾಸಾಯನಿಕ ಸಿಂಪಡಿಸಲಾಗುತ್ತಿರುವ ಬಗ್ಗೆ ನಾಗರಿಕರಿಂದ ದೂರು ಲಭಿಸಿದ ಹಿನ್ನೆಲೆಯಲ್ಲಿ ಫುಡ್ ಸೇಫ್ಟಿ ಇನ್ಸ್ಪೆಕ್ಟರ್ ಮುಸ್ತಫಾ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ನಗರಸಭಾ ಮೀನು ಮಾರುಕಟ್ಟೆಯಲ್ಲಿ ಹತ್ತಕ್ಕೂ ಹೆಚ್ಚು ವ್ಯಾಪಾರಿಗಳಿಂದ ಹಲವು ಮೀನುಗಳನ್ನು ಸಂಗ್ರಹಿಸಿ, ಇವುಗಲ ತಪಾಸಣೆಗಾಗಿ ಲ್ಯಾಬ್‍ಗೆ ಕಳುಹಿಸಿಕೊಟ್ಟರು. ಮೀನಿನಲ್ಲಿ ಮಾರಕ ರಾಸಾಯನಿಕ ಪತ್ತೆಯಾದಲ್ಲಿ ಮಾರಾಟಗಾರರ ವಿರುದ್ಧ ಆಹಾರ ಸುರಕ್ಷಾ ಕಾಯ್ದೆಯನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries