ಉಪ್ಪಳ: ನಾಪತ್ತೆಯಾಗಿದ್ದ ಜಾಖರ್ಂಡ್ ಮೂಲದ ಕಾರ್ಮಿಕನೋರ್ವನ ಮೃತದೇಹ ಬಾಯಾರು ಕನಿಯಾಲ ಮುಂಡೋಡಿಯಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಜಾಖರ್ಂಡ್ನ ಮೂಲದ ಕನಿಯಾಲದ ಬಾಡಿಗೆ ಕ್ವಾರ್ಟರ್ಸ್ನಲ್ಲಿ ವಾಸಿಸುತ್ತಿದ್ದ ಸಿಬಾಚಾ (35) ಅವರ ಮೃತದೇಹ ಸಮಾಧಿ ಮಾಡಿದ ರೀತಿಯಲ್ಲಿ ಪತ್ತೆ ಮಾಡಲಾಗಿದೆ.
ಘಟನೆಯ ಬಗ್ಗೆ ಸ್ಥಳೀಯರು ಮಂಜೇಶ್ವರ ಪೆÇಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪೆÇಲೀಸರು ಸಂಬಂಧಿ ಸಂಜಯ್ ಹಾಗೂ ತೋಟದ ಮಾಲೀಕರನ್ನು ವಿಚಾರಣೆಗೊಳಪಡಿಸಿದರು.
ಒಂದೂವರೆ ತಿಂಗಳ ಹಿಂದೆ ಶವವನ್ನು ಹೂಳಲಾಗಿತ್ತು ಎಂದು ಸಂಜಯ್ ಪೆÇಲೀಸರಿಗೆ ತಿಳಿಸಿದ್ದಾರೆ. ಆದರೆ ತೋಟದ ಮಾಲೀಕ ಸಂಜಯ್ ನೀಡಿದ ಹೇಳಿಕೆಗಿಂತ ಭಿನ್ನವಾಗಿ ಹೇಳಿರುವರೆಂದು ಪೆÇಲೀಸರು ತಿಳಿಸಿದ್ದಾರೆ.
ಡಿಸೆಂಬರ್ 20 ರಂದು ಜಾಖರ್ಂಡ್ಗೆ ಹಿಂತಿರುಗುವುದೆಂದು ಹೋದ ಸಿಬಾಚ, 21 ರಿಂದ ನಾಪತ್ತೆಯಾಗಿದ್ದರು. ನಂತರ ಸಂಜಯ್ ಪೆÇಲೀಸರಿಗೆ ತಿಳಿಸಿದ್ದು, ಸಿಬಾಚ ಕೆರೆಯಲ್ಲಿ ಮುಳುಗಿದ್ದು, ಆತನ ಶವವನ್ನು ತೋಟದ ಮಾಲೀಕರು, ಹೊರರಾಜ್ಯದ ಕಾರ್ಮಿಕರು ಸೇರಿದಂತೆ 18 ಮಂದಿ ಕೆರೆಯ ಬಳಿಯೇ ಹೂತಿಟ್ಟಿದ್ದು, ಘಟನೆಯ ಬಗ್ಗೆ ಯಾರಿಗೂ ಮಾಹಿತಿ ನೀಡಿರಲಿಲ್ಲ.
ತೋಟದ ಮಾಲೀಕರು ನೀಡಿರುವ ಹೇಳಿಕೆಯಂತೆ ಸಿಬಾಚ ಒಂದೂವರೆ ತಿಂಗಳ ಹಿಂದೆ ತೋಟದ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದು, ನಂತರ ಅವರ ಶವವನ್ನು ಇತರ ಕಾರ್ಮಿಕರ ಸಹಾಯದಿಂದ ಹೂಳಲಾಯಿತು.
ಇಬ್ಬರ ಹೇಳಿಕೆಗಳು ಭಿನ್ನವಾಗಿರುವುದರಿಂದ ಸಿಬಾಚನ ಸಾವಿನ ಸುತ್ತ ನಿಗೂಢತೆ ಹೆಚ್ಚುತ್ತಿದೆ.
ವಿಧಿವಿಜ್ಞಾನ ತಜ್ಞರು ಆಗಮಿಸಿದ ಬಳಿಕ ಮೃತದೇಹವನ್ನು ಹೊರತೆಗೆದು ಕಣ್ಣೂರು ಪೆರಿಯದ ಸರ್ಕಾರಿ ವ್ಯೆದ್ಯಕೀಯ ಕಾಲೇಜಿಗೆ ರವಾನಿಸಲಾಯಿತು. ಘಟನಾ ಸ್ಥಳಕ್ಕೆ ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದೆ. ಶವವನ್ನು ಹೂತಿಟ್ಟ ಸ್ಥಳವನ್ನು ಪೆÇಲೀಸ್ ರಕ್ಷಣೆಯಲ್ಲಿ ಇರಿಸಲಾಗಿತ್ತು.
ಮಂಜೇಶ್ವರ ಠಾಣಾಧಿಕಾರಿ ಕೆ ಸಂತೋಷ್ ಕುಮಾರ್ ಮತ್ತು ಎಸ್ಐ ಎನ್ ಅನ್ಸಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.