HEALTH TIPS

ಆರೋಪಿಯ ಪತ್ತೆಗೆ ಅರಣ್ಯದೊಳಗೆ ತೆರಳಿದ್ದ ಪೋಲೀಸರು ಕಂಡದ್ದು ಆಘಾತಕಾರಿ ದೃಶ್ಯ; ಮೂರು ತಿಂಗಳ ಹಿಂದಿನ ಅಸ್ಥಿಪಂಜರ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

                                          

                   ತಿರುವನಂತಪುರ: ಅಡವಿಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅಸ್ಥಿಪಂಜರವೊಂದು ಪತ್ತೆಯಾಗಿದೆ. ಭರತನ್ನೂರಿನಲ್ಲಿ ಯುವಕನ ಹತ್ಯೆಗೆ ಯತ್ನಿಸಿದ ಪ್ರಕರಣದ ಆರೋಪಿಗಳ ಹುಡುಕಾಟಕ್ಕೆ ಅರಣ್ಯಕ್ಕೆ ತೆರಳಿದ ಪೋಲೀಸರ ತಂಡಕ್ಕೆ ಅಸ್ಥಿಪಂಜರ ಪತ್ತೆಯಾಗಿದೆ. ನೆಡುಮಂಗಾಡ್  ಪಾಂಗೋಡು ಮೈಲಮೂಡು ಸುಮತಿ ಎಂಬುವರು ಸಾವಿಗೀಡಾದ ತಿರುವಿನಲ್ಲಿ ಘಟನೆ ನಡೆದಿದೆ.

                   ವಲಿಯಮಲ ಪೊಲೀಸ್ ಠಾಣೆಯ ಆವರಣದಿಂದ ನಾಪತ್ತೆಯಾಗಿರುವ ವೃದ್ಧೆಯ ಅಸ್ಥಿಪಂಜರ ಇದಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರ ಪ್ರಕಾರ, ಇದು ಸುಮಾರು ಮೂರು ತಿಂಗಳ ಹಳೆಯದು. ಡಿಎನ್‍ಎ ಪರೀಕ್ಷೆಯಿಂದ ಮಾತ್ರ ವ್ಯಕ್ತಿಯನ್ನು ಗುರುತಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

                  ಅಸ್ಥಿಪಂಜರ ಪತ್ತೆಯಾದ ಸ್ಥಳದ ಬಳಿ ಮೊಬೈಲ್ ಫೆÇೀನ್ ಪತ್ತೆಯಾಗಿದೆ. ಇದು ವಲಿಯಮಲ ನಿವಾಸಿಯದ್ದೆಂದು ಪೊಲೀಸರು ಖಚಿತಪಡಿಸಿದ್ದಾರೆ. ಕೆಲ ಪ್ರಕರಣಗಳಲ್ಲಿ ಪಾಲೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ವ್ಯಕ್ತಿಯದಾಗಿರಬಹುದೆಂದು  ಪೆÇಲೀಸರು ಶಂಕಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries