HEALTH TIPS

ನೆಹರೂ ಯುವಕೇಂದ್ರದ ಜಿಲ್ಲಾ ಯುವ ಸಮಾವೇಶಕ್ಕೆ ಚಾಲನೆ

                                                              

                ಕಾಸರಗೋಡು: ನೆಹರು ಯುವ ಕೇಂದ್ರದ ನೇತೃತ್ವದಲ್ಲಿ ಜಿಲ್ಲೆಯ ಕ್ಲಬ್‍ಗಳ ಕಾರ್ಯ ಚಟುವಟಿಕೆಗಳು ಮಾದರಿಯಾಗಬೇಕು ಎಂದು ಶಾಸಕ ಎನ್.ಎ.ನೆಲ್ಲಿಕುನ್ನು ಹೇಳಿದರು. 

                  ನೆಹರು ಯುವಕೇಂದ್ರವು ಕಲೆಕ್ಟರೇಟ್  ಸಭಾಂಗಣದಲ್ಲಿ ಆಯೋಜಿಸಿದ್ದ ಯುವ ಸಮಾವೇಶವನ್ನು ಶಾಸಕರು ಉದ್ಘಾಟಿಸಿ ಮಾತನಾಡಿದರು. 

               ಸ್ವಚ್ಛತೆ ಮತ್ತು ದತ್ತಿ ಚಟುವಟಿಕೆಗಳಲ್ಲಿ ಕ್ಲಬ್ ಗಳನ್ನು ಬಲಪಡಿಸಬೇಕು. ಸಪ್ತಭಾಷಾ ಸಂಗಮ ನೆಲವಾದ ಕಾಸರಗೋಡು ಭಾರತದ ಸಮಗ್ರ ಮಿನಿ ಭಾರತವೇ ಆಗಿದ್ದು, ಜಿಲ್ಲೆಯನ್ನು ವೈವಿಧ್ಯತೆಯಿಂದ ಶ್ರೀಮಂತಗೊಳಿಸಲು ಯುವಕರು ಮುಂದಾಗಬೇಕು ಎಂದು ಶಾಸಕರು ಹೇಳಿದರು.


                     ಸಮಾರಂಭದಲ್ಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕೋವಿಡ್ ಯುಗದಲ್ಲಿ ಖಿನ್ನತೆಗೆ ಒಳಗಾದ ಮತ್ತು ಸಂಕಷ್ಟದಲ್ಲಿರುವ ಯುವಕರನ್ನು ಸಮುದಾಯದ ಯುವ ಕ್ಲಬ್‍ಗಳು ಮುನ್ನೆಲೆಯಲ್ಲಿ ಬೆಳೆಸುವಲ್ಲಿ ಸಾಧ್ಯವಾಗುತ್ತದೆ. ನೆಹರು ಯುವ ಕೇಂದ್ರವು ಸಮಾಜದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಹೇಳಿದರು.

                      ಸಮಾವೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಹಾಗೂ ಕ್ಲಬ್‍ಗಳಿಗೆ ಶಾಸಕ ಎನ್‍ಎ ನೆಲ್ಲಿಕುನ್ನು ಹಾಗೂ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಪ್ರಶಸ್ತಿ ಪ್ರದಾನ ಮಾಡಿದರು. 2021-22ನೇ ಸಾಲಿನ ಜಿಲ್ಲಾ ಯುವಜನ ಕೂಟದ ಪ್ರಶಸ್ತಿಗೆ ಅರ್ಹವಾದ ಯುವ ಪ್ರತಿಭೆ, ಸಂಘಟನೆಗಳನ್ನು ಗೌರವಿಸಲಾಯಿತು.  ಅಟ್ಲಾಸ್ ಸ್ಟಾರ್ ಆಟ್ರ್ಸ್ ಆಂಡ್ ಸ್ಪೋಟ್ರ್ಸ್ ಕ್ಲಬ್, ಸಂಗಮ್ ಆಟ್ರ್ಸ್ ಆಂಡ್ ಸ್ಪೋಟ್ರ್ಸ್ ಕ್ಲಬ್ ಹಾಗೂ ಯೂತ್ ಫೈಟರ್ಸ್ ಎಣ್ಣಪ್ಪಾರ ತಂಡಗಳು ಸ್ವಚ್ಛ ಭಾರತ ಪ್ರಶಸ್ತಿ ಪಡೆದುಕೊಂಡವು. ಫಾರೂಕ್, ಸನುಜಾ ಮತ್ತು ರೀನಾ ಸ್ವಯಂಸೇವಕರಿಗೆ ಸ್ವಚ್ಛ ಭಾರತ ಪ್ರಶಸ್ತಿಯನ್ನು ನೀಡಲಾಯಿತು. 

                       ನೆಹರು ಯುವಕೇಂದ್ರ ಜಿಲ್ಲಾ ಸಂಯೋಜಕ ಪಿ.ಅಖಿಲ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂದನನ್, ನೈರ್ಮಲ್ಯ ಮಿಷನ್ ಜಿಲ್ಲಾ ಸಂಯೋಜಕಿ ಲಕ್ಷ್ಮಿ ಮಾತನಾಡಿದರು. ಜಿಷ್ಣು ವಂದಿಸಿದರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries