HEALTH TIPS

ವಂದೇ ಭಾರತ್ ರೈಲು ಘೋಷಣೆಯಾಗುತ್ತಿದ್ದಂತೆ ರಾಜ್ಯ ಸರ್ಕಾರ ಕೆ ರೈಲಿನಿಂದ ಹಿಂದೆ ಸರಿಯಬೇಕು: ಪ್ರತಿಪಕ್ಷ ನಾಯಕ

               ತಿರುವನಂತಪುರಂ: ಬಜೆಟ್‍ನಲ್ಲಿ ವಂದೇ ಭಾರತ್ ರೈಲು ಸೇವೆಯನ್ನು ಘೋಷಿಸಿರುವುದರಿಂದ ಕೇರಳ ಕೆ ರೈಲು ಯೋಜನೆಯಿಂದ ಹಿಂದೆ ಸರಿಯಬೇಕು ಎಂದು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಹೇಳಿದರು. ಮೂರು ವರ್ಷಗಳಲ್ಲಿ ಸುಮಾರು 400 ವಂದೇ ಭಾರತ್ ರೈಲು ಸೇವೆಗಳನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಲಾಗಿದೆ. ಈ ಪರಿಸ್ಥಿತಿಯಲ್ಲಿ ಕೇರಳಕ್ಕೆ ಹೆಚ್ಚಿನ ಸೇವೆಗಳನ್ನು ತಂದು ರಾಜ್ಯವನ್ನು ವಿನಾಶಗೊಳಿಸುವ ಕೆ ರೈಲ್ ಯೋಜನೆಯಿಂದ ಹಿಂದೆ ಸರಿಯಲು ರಾಜ್ಯ ಸರ್ಕಾರ ಸಿದ್ಧವಾಗಬೇಕು ಎಂದು ವಿ.ಡಿ.ಸತೀಶನ್ ಹೇಳಿದರು.

                 ಈ ರೈಲುಗಳು ಗಂಟೆಗೆ 160 ರಿಂದ 180 ಕಿಮೀ ವೇಗವನ್ನು ಹೊಂದಿವೆ. ಹೂಡಿಕೆಯನ್ನು ಭಾರತೀಯ ರೈಲ್ವೇ ಭರಿಸಲಿದೆ. ಆದ್ದರಿಂದ ಭಾರೀ ಆರ್ಥಿಕ ಹೊರೆ ಹಾಗೂ ಸಾಮಾಜಿಕ ಹಾಗೂ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಕೆ ರೈಲ್ ನಿಂದ ಕೇರಳ ಸರಕಾರ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

               ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‍ನಲ್ಲಿ ಸಾರಿಗೆ ಅಭಿವೃದ್ಧಿಗಾಗಿ 400 ಹೊಸ ವಂದೇ ಭಾರತ್ ರೈಲುಗಳನ್ನು ಘೋಷಿಸಲಾಗಿದೆ. ವಂದೇ ಭಾರತ್ ರೈಲುಗಳು, ಇಎಂಯು ರೈಲು ಸೆಟ್‍ಗಳು ದೇಶದ ಅತ್ಯಂತ ವೇಗದ ರೈಲುಗಳಾಗಿವೆ. ಪ್ರಸ್ತುತ ದೆಹಲಿಯಿಂದ ವಾರಣಾಸಿ ಮತ್ತು ಕತ್ರಾಕ್ಕೆ ಎರಡು ರೈಲುಗಳಿವೆ. ಸುಮಾರು 400 ವಂದೇ ಭಾರತ್ ರೈಲುಗಳ ಸೇರ್ಪಡೆಯೊಂದಿಗೆ, ರೈಲು ಸಾರಿಗೆಯ ಸ್ವರೂಪ ಬದಲಾಗಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries