HEALTH TIPS

ಕೆ.ಎಸ್.ಇ.ಬಿ.ಯಿಂದ ಹೊಸ ಬಹುಮಾನ ಯೋಜನೆ ಪ್ರಾರಂಭ

             ಕಾಸರಗೋಡು: ಕೆ.ಎಸ್.ಇ.ಬಿ ಇಂಧನ ಸಂರಕ್ಷಣೆಗೆ ಸಂಬಂಧಿಸಿದಂತೆ, 'ಇಂಧನ ಸಂರಕ್ಷಣೆ ನಾಳೆ' ಎಂಬ ಹೊಸ ಬಹುಮಾನ ಯೋಜನೆಯನ್ನು ಪ್ರಾರಂಭಿಸಲಿದೆ. 

            ಫೆಬ್ರವರಿಯಿಂದ ಮೇ ತಿಂಗಳವರೆಗೆ ಗೃಹ ಬಳಕೆಯ ವಿದ್ಯುತ್ ಬಳಕೆ ಕಳೆದ ವರ್ಷದ(2019-2020) ಬಳಕೆಯೊಂದಿಗೆ ತುಲನೆಗೊಳಿಸಿ ಹೆಚ್ಚಿನ ಪ್ರಮಾಣದ ವಿದ್ಯುತ್ ಬಳಕೆ ಕಡಿಮೆಮಾಡಿದ ಪ್ರತಿ ವಿದ್ಯುತ್ ಸೆಕ್ಷನ್ ವಿಭಾಗದ ಐವರಿಗೆ ಒಂದೊಂದು ಎಲ್.ಇ.ಡಿ. ಟ್ಯೂಬ್ ಲೈಟ್ ಬಲ್ಬ್ ಗಳನ್ನು ಬಹುಮಾನವಾಗಿ ನೀಡಲಾಗುವುದು.  ವಿದ್ಯುತ್ ಬಳಕೆ ಹೊಂದಿರುವ ಮನೆಗಳನ್ನು ಪರಿಗಣಿಸಲಾಗುತ್ತದೆ. ಜಿಲ್ಲೆಯ ಹತ್ತು ಕೈಗಾರಿಕಾ ಗ್ರಾಹಕರು ಪೀಕ್ ಅವರ್‍ಗಳಲ್ಲಿ (ಸಂಜೆ 6 ರಿಂದ ರಾತ್ರಿ 10 ರವರೆಗೆ) ತಮ್ಮ ಬಳಕೆಯನ್ನು ಕಡಿಮೆ ಮಾಡಿದರೆ ಅವರಿಗೆ ಇಂಧನ ಸಂರಕ್ಷಣಾ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇದನ್ನು ಹಿಂದಿನ ವರ್ಷದ (2019-20) ಅದೇ ತಿಂಗಳುಗಳಲ್ಲಿನ ಬಳಕೆಗೆ ಹೋಲಿಸಲಾಗುತ್ತದೆ. ಮಾಹಿತಿಗೆ ದೂರವಾಣಿ ಸಂಖ್ಯೆ - 04994 230382 ಸಂಪರ್ಕಿಸಬಹುದು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries