ಕೊಚ್ಚಿ: ನಟಿ ಮೇಲೆ ಹಲ್ಲೆ ನಡೆಸಿದ ಪ್ರಕರಣದ ತನಿಖಾಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ನಟ ದಿಲೀಪ್ ಅವರ ಕೊಚ್ಚಿ ಎಂಜಿ ರಸ್ತೆಯಲ್ಲಿರುವ ಮಾಥರ್ ಅಪಾರ್ಟ್ಮೆಂಟ್ ಮೇಲೆ ತನಿಖಾ ತಂಡ ದಾಳಿ ನಡೆಸಿದೆ. ಫ್ಲಾಟ್ ನಲ್ಲಿ ಸಂಚು ನಡೆದಿದೆ ಎಂಬ ಹೇಳಿಕೆ ಆಧರಿಸಿ ದಾಳಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪುರಾವೆಗಳನ್ನು ಹುಡುಕಲು ದಾಳಿ ನಡೆಸಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಏತನ್ಮಧ್ಯೆ, ದಿಲೀಪ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ಮತ್ತು ಫೋನ್ಗಳನ್ನು ಹಸ್ತಾಂತರಿಸುವಂತೆ ಪ್ರಾಸಿಕ್ಯೂಷನ್ ಕೋರಿಕೆಯನ್ನು ಹೈಕೋರ್ಟ್ ಪರಿಗಣಿಸುತ್ತಿದೆ. ಜೊತೆಗೆ ದಿಲೀಪ್ ಮತ್ತು ಆತನ ಸಹಚರರ ಮೊಬೈಲ್ ಫೋನ್ ಗಳನ್ನು ತಪಾಸಣೆಗೆ ಕಳುಹಿಸುವ ಕುರಿತು ಹೈಕೋರ್ಟ್ ಇಂದು ನಿರ್ಧಾರ ಕೈಗೊಳ್ಳಲಿದೆ.
ದಿಲೀಪ್ ನನ್ನು ಕಸ್ಟಡಿಗೆ ನೀಡಬೇಕು ಎಂದು ಪ್ರಾಸಿಕ್ಯೂಷನ್ ವಾದಿಸಿದೆ. ತನಿಖಾ ತಂಡ ಕೋರಿದ ಎಲ್ಲ ಫೋನ್ಗಳನ್ನು ದಿಲೀಪ್ ನೀಡಿರಲಿಲ್ಲ. ಇದು ತನಿಖೆಗೆ ಅಸಹಕಾರಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ ವಿಸ್ತೃತ ತನಿಖೆಗಾಗಿ ದಿಲೀಪ್ ಅವರನ್ನು ಕಸ್ಟಡಿಗೆ ಒಪ್ಪಿಸಬೇಕೆಂದು ಪ್ರಾಸಿಕ್ಯೂಷನ್ ಕೋರಿದೆ. ಜಾಮೀನು ನೀಡಬೇಕೇ ಬೇಡವೇ ಎಂಬುದನ್ನು ನಿರ್ಧರಿಸುವಲ್ಲಿ ತನಿಖೆಗೆ ಸಹಕರಿಸುವುದು ನಿರ್ಣಾಯಕ ಎಂದು ನ್ಯಾಯಾಲಯ ದಿಲೀಪ್ಗೆ ತಿಳಿಸಿದೆ.