ತಿರುವನಂತಪುರ: ಭಾನುವಾರ ಲಾಕ್ ಡೌನ್ ಸಮಾಂತರ ನಿಯಂತ್ರಣ ಹೇರುತ್ತಿರುವುದರಿಂದ ಪ್ರಾರ್ಥನೆಗಳಿಗಾಗಿ ಚರ್ಚ್ ಗೆ ತೆರಳಲಾಗದ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ಸಡಿಲಿಸುವಂತೆ ಆರ್ಥೊಡಾಕ್ಸ್ ಸಭೆ ಒತ್ತಾಯಿಸಿದೆ. ಭಾನುವಾರದ ನಿರ್ಬಂಧಗಳು ಕಟ್ಟುನಿಟ್ಟಾಗಿರುವುದರಿಂದ ಭಕ್ತರಿಗೆ ಪೂಜೆಗೆ ಹಾಜರಾಗಲು ಅವಕಾಶವಾಗುತ್ತಿಲ್ಲ. ಈ ಪರಿಸ್ಥಿತಿಯನ್ನು ನಿವಾರಿಸಬೇಕು ಎಂದು ಬೆಸಿಲಿಯೋಸ್ ಮಾರ್ಥೋಮಾ ಮಾಥ್ಯೂಸ್ ತೃತೀಯ ಕೆಥೋಲಿಕಾ ಬಾವಾ ಆಗ್ರಹಿಸಿದರು.
ಆರ್ಥೊಡಾಕ್ಸ್ ಚರ್ಚ್ ಸರ್ಕಾರ ಈ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ಸರ್ಕಾರದ ಎಲ್ಲಾ ರಕ್ಷಣಾ ಪ್ರಯತ್ನಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಚರ್ಚ್ ಹೇಳಿದೆ.
ಪ್ರಸ್ತುತ, ರಾಜ್ಯದಲ್ಲಿ ಭಾನುವಾರ ಕಟ್ಟುನಿಟ್ಟಾದ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಕಳೆದ ಪರಿಶೀಲನಾ ಸಭೆಯಲ್ಲಿ, ಭಾನುವಾರವೂ ಲಾಕ್ಡೌನ್ ಸಮಾಂತರವಾದ ನಿಯಂತ್ರಣವನ್ನು ಮುಮದಿನ ಭಾನುವಾರವೂ ಮುಂದುವರಿಸಲು ನಿರ್ಧರಿಸಲಾಗಿದೆ. ಭಾನುವಾರ ಅಗತ್ಯ ಸೇವೆಗಳನ್ನು ಮಾತ್ರ ಅನುಮತಿಸಲಾಗಿದೆ. ವ್ಯಾಕ್ಸಿನೇಷನ್ ಮತ್ತು ಆಸ್ಪತ್ರೆ ಸೇವೆಗಳಿಗೆ ಪ್ರಯಾಣ ಪರವಾನಗಿ ನೀಡಲಾಗಿದೆ. ಪ್ರಯಾಣಿಕರಿಗೆ ತುರ್ತು ತೆರಳಬೇಕಿದ್ದರೆ ಸಾಕಷ್ಟು ದಾಖಲೆಗಳೊಂದಿಗೆ ಕಾರಣ ನೀಡುವ ನೋಟಿಸ್ ತೋರಿಸುವ ಅವಶ್ಯಕತೆಯೂ ಇದೆ. ಮಧ್ಯರಾತ್ರಿ 12 ರಿಂದ ನಿರ್ಬಂಧಗಳು ಜಾರಿಯಲ್ಲಿರುವ ಕಾರಣ ಕ್ರೈಸ್ತರು ಬೆಳಗ್ಗೆ ಚರ್ಚ್ಗೆ ತೆರಳಿ ಪ್ರಾರ್ಥನೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣ ಆರ್ಥೊಡಾಕ್ಸ್ ಚರ್ಚ್ ಸರ್ಕಾರದಲ್ಲಿ ಮನವಿ ಮಾಡಿ ಅವಕಾಶಕ್ಕೆ ಕೋರಿದೆ.