ಕಾಸರಗೋಡು: ಏಮ್ಸ್ ವಿಷಯದಲ್ಲಿ ಕೇರಳ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಕಾಸರಗೋಡಿನ ಹೆಸರನ್ನು ಒಳಪಡಿಸುವಂತೆ ಆಗ್ರಹಿಸಿ ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ನಡೆದುಬರುತ್ತಿರುವ ನಿರಾಹಾರ ಸತ್ಯಾಗ್ರಹವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಖ್ಯಾತ ಸಾಮಾಜಿಕ ಹೋರಾಟಗಾರ್ತಿ ದಯಾಬಾಯಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಫೆ. 7ನ್ನು ಹೋರಾಟ ಐಕ್ಯದಾಢ್ರ್ಯ ದಿನವನ್ನಾಗಿ ಆಚರಿಸಲಾಗುವುದು. ಈ ಹಿನ್ನೆಲೆಯಲ್ಲಿ ಜಿಲ್ಲೆಯ 300ಕೇಂದ್ರಗಳಲ್ಲಿ ವೈವಿಧ್ಯಮಯ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು. ವಿದ್ಯಾರ್ಥಿ, ಯುವಜನತೆ, ಕಾರ್ಮಿಕರ ಸಂಘಟನೆಗಳ ಸಹಕಾರದೊಂದಿಗೆ ಹೋರಾಟ ನಡೆಯಲಿದೆ. ಹೋರಾಟದ ಪ್ರಚಾರಾರ್ಥ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಯಾಚಿಸಲಾಗುವುದು. ಕಳೆದ 22ದಿವಸಗಳಿಂದ ನಿರಾಹಾರ ಸತ್ಯಾಗ್ರಹ ನಡೆಯುತ್ತಿದ್ದು, ಹಲವಾರು ಸಂಘಟನೆಗಳು ಬೆಂಬಲ ಸಊಚಿಸಿರುವುದಾಗಿಯೂ ದಯಾಬಾಯಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೆ.ಎ ಸಜಿ, ಶರೀನಾ ಕೋಟ್ಟಪುರಂ, ನಾಸರ್ ಚೆರ್ಕಳ, ಅಂಬಲತ್ತರ ಕುಞÂಕೃಷ್ಣನ್, ಸಿಸ್ಟರ್ ಜಯಾ ಆಂಟೋ ಮಂಗಲತ್ ಉಪಸ್ಥಿತರಿದ್ದರು.