ನವದೆಹಲಿ: ಸಿಪಿಎಂ ಮಾಜಿ ರಾಜ್ಯ ಕಾರ್ಯದರ್ಶಿ ಎ ವಿಜಯರಾಘವನ್ ಸಿಪಿಎಂ ಪಿಬಿ ಸೇರುವ ಸಾಧ್ಯತೆ ಇದೆ. ಎಸ್ ರಾಮಚಂದ್ರನ್ ಪಿಳ್ಳೈ ಅವರು ಪೆÇಲಿಟ್ ಬ್ಯೂರೊದಿಂದ ತೆರವಾದ ಸ್ಥಾನಕ್ಕೆ ಎಲ್ ಡಿಎಫ್ ಸಂಚಾಲಕರು ನೇಮಕವಾಗಲಿದ್ದಾರೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್, ಎಂಎ ಬೇಬಿ ಮತ್ತು ಎಸ್ ರಾಮಚಂದ್ರನ್ ಪಿಳ್ಳೈ ಹಾಲಿ ಪೆÇಲಿಟ್ ಬ್ಯೂರೋ ಸದಸ್ಯರಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಕಣ್ಣೂರಿನಲ್ಲಿ ನಡೆಯುವ ಪಕ್ಷದ ಸಮಾವೇಶದ ಬಳಿಕ ಗರಿಷ್ಠ 75 ವರ್ಷಗಳ ವಯೋಮಿತಿಯನ್ನು ವಿಧಿಸುವ ಸಾಧ್ಯತೆಯಿದ್ದು ಈ ಸಂದರ್ಭ ಅವರು ಎಸ್ಆರ್ಪಿ ಕೇಂದ್ರ ಸಮಿತಿಗೆ ವಿಶೇಷ ಆಹ್ವಾನಿತರಾಗಿರಲಿದ್ದಾರೆ ಎಂಬ ವರದಿಗಳಿವೆ. ಸೂರ್ಯಕಾಂತ್ ಮಿಶ್ರಾ ಮತ್ತು ಬೀಮನ್ ಬಸು ಪಿಬಿಯಿಂದ ಹೊರಬಿದ್ದ ಇನ್ನಿಬ್ಬರು ಮುಖಂಡರು.
ಆದರೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ 75 ವರ್ಷಗಳ ನಂತರವೂ ಪಿಬಿಯಲ್ಲೇ ಇರುತ್ತಾರೆ. ಇವರಲ್ಲದೆ ಕೊಡಿಯೇರಿ ಬಾಲಕೃಷ್ಣನ್ ಹಾಗೂ ಎಂಎ ಬೇಬಿ ಪಿಬಿಯಲ್ಲೇ ಉಳಿಯಲಿದ್ದಾರೆ ಎಂದು ವರದಿಯಾಗಿದೆ.
ಎ ವಿಜಯರಾಘವನ್ ಪಿಬಿಗೆ ಸೇರ್ಪಡೆಗೊಂಡರೆ, ಎಲ್ಡಿ ಎಫ್ ಗೆ ಹೊಸ ಸಂಚಾಲಕರ ನೇಮಕವಾಗಬೇಕಾಗುತ್ತದೆ. ಈ ಸ್ಥಾನಕ್ಕೆ ಎ.ಕೆ.ಬಾಲನ್ ಅಥವಾ ಇ.ಪಿ.ಜಯರಾಜನ್ ಅವರನ್ನು ಪರಿಗಣಿಸಬಹುದು ಎಂದು ವರದಿಯಾಗಿದೆ.
ಕೇಂದ್ರ ಸಮಿತಿಯಲ್ಲಿ ಕೇರಳದ ವಿಶೇಷ ಆಹ್ವಾನಿತರು ಸೇರಿದಂತೆ 18 ಮಂದಿ ಸದಸ್ಯರಿದ್ದಾರೆ. ಪಾಲೋಳಿ ಮೊಹಮ್ಮದ್ ಕುಟ್ಟಿ ಮತ್ತು ವಿ.ಎಸ್.ಅಚ್ಯುತಾನಂದನ್ ವಿಶೇಷ ಅತಿಥಿಗಳಾಗಿದ್ದಾರೆ. ಪಕ್ಷ ರಚನೆಗೆ ಕಾರಣರಾದ ನಾಯಕರಾಗಿ ವಿಎಸ್ ಅವರನ್ನು ಉಳಿಸಿಕೊಳ್ಳಲಾಗುವುದು ಎಂದು ವರದಿಯಾಗಿದೆ. ಪಾಲೋಳಿ ರಾಜ್ಯ ಸಮಿತಿಗೆ ರಾಜೀನಾಮೆ ನೀಡಲಿದ್ದಾರೆ ಎಂದು ವರದಿಯಾಗಿದೆ.
ಕೇಂದ್ರ ಸಮಿತಿ ಸದಸ್ಯರಾದ ಪಿ ಕರುಣಾಕರನ್ ಮತ್ತು ವೈಕಂ ವಿಶ್ವನ್ ಬದಲಾಗಬಹುದು. ಇಬ್ಬರೂ ನಾಯಕರಿಗೆ ವಯಸ್ಸು ಅಡ್ಡಿಯಾಗಿದೆ. ಪಿ ಕರುಣಾಕರನ್ ಅವರಿಗೆ 77 ವರ್ಷ ಮತ್ತು ವೈಕಂ ವಿಶ್ವನ್ ಅವರಿಗೆ 83 ವರ್ಷ. ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಎಂ.ಸಿ.ಜೋಸೆಫೀನ್ ಮತ್ತೊಬ್ಬ ನಾಯಕಿ. ಸಚಿವರಾದ ಕೆ.ಎನ್.ಬಾಲಗೋಪಾಲ್, ಪಿ.ರಾಜೀವ್ ಮತ್ತು ಪಿ.ಎ.ಮೊಹಮ್ಮದ್ ರಿಯಾಜ್ ಕೂಡ ಕೇಂದ್ರ ಸಮಿತಿ ಸೇರುವ ನಿರೀಕ್ಷೆಯಿದೆ.
ಕೇಂದ್ರ ಸಮಿತಿ ಸದಸ್ಯರಾದ ಪಿಣರಾಯಿ ವಿಜಯನ್, ಕೊಡಿಯೇರಿ ಬಾಲಕೃಷ್ಣನ್, ಎ ವಿಜಯರಾಘವನ್, ಎಕೆ ಬಾಲನ್, ಎಂವಿ ಗೋವಿಂದನ್, ಇಪಿ ಜಯರಾಜನ್, ಕೆಕೆ ಶೈಲಜಾ, ಪಿಕೆ ಶ್ರೀಮತಿ, ಟಿಎಂ ಥಾಮಸ್ ಐಸಾಕ್, ಎಳಮರಮ್ ಕರೀಂ, ಕೆ ರಾಧಾಕೃಷ್ಣನ್ ಮತ್ತು ಎಂಎ ಬೇಬಿ ಮುಂದುವರಿಯಲಿದ್ದಾರೆ.