HEALTH TIPS

ಬಾಕಿ 1 ರೂಪಾಯಿ ಕೇಳಿದ್ದಕ್ಕೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ಹೈಡ್ರಾಮ ಸೃಷ್ಟಿಸಿದ ಬಸ್​ ಕಂಡಕ್ಟರ್!​

             ತಿರುವನಂತಪುರಂ: ಬಾಕಿ ಒಂದು ರೂಪಾಯಿ ಕೇಳಿದ್ದಕ್ಕೆ ಬಸ್​ ಕಂಡಕ್ಟರ್​ ಪ್ರಯಾಣಿಕರೊಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿರುವ ಅಮಾನವೀಯ ಘಟನೆ ಕೇರಳದ ಪೆರೂರ್ಕಡದಲ್ಲಿ ನಡೆದಿದೆ.

           ಸಂತ್ರಸ್ತ ಪ್ರಯಾಣಿಕನನ್ನು ಕಲ್ಲಂಬಳಂ ಮೂಲದ ಶಿರಾಸ್ ಎಂದು ಗುರುತಿಸಲಾಗಿದೆ.

ಹೊಡೆತ ತಿಂದ ಶಿರಾಸ್​ಗೂ ಮುನ್ನವೇ ಕಂಡಕ್ಟರ್​ ಆತನ ವಿರುದ್ಧ ದೂರು ದಾಖಲಿಸಿದ್ದು, ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಡ್ರಾಮಾ ಮಾಡಿದ್ದಾನೆ.

             ಬಾಕಿ ಹಣ ಕೇಳಿದ್ದಕ್ಕೆ ಇತರೆ ಪ್ರಯಾಣಿಕರ ಎದುರಲ್ಲೇ ಶಿರಾಸ್​ ಮೇಲೆ ಕಂಡಕ್ಟರ್​ ಹಲ್ಲೆ ಮಾಡಿದ್ದಾರೆ. ಈ ಘಟನೆ ಒಂದು ದಿನದ ಹಿಂದೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವಕ ಕಂಡಕ್ಟರ್​ ವಿರುದ್ಧ ದೂರು ದಾಖಲಿಸಿದ್ದಾನೆ.

             ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆದಾಗ ಆರೋಪಿ ಕಂಡಕ್ಟರ್​ ಕೂಡ ಸಂತ್ರಸ್ತ ಶಿರಾಸ್​ ವಿರುದ್ಧ ದೂರು ದಾಖಲಿಸಿದ್ದಾನೆ. ಎರಡು ಕಡೆ ದೂರು ದಾಖಲಾಗಿರುವುದರಿಂದ ಗೊಂದಲಕ್ಕೀಡಾಗಿರುವ ಪೊಲೀಸರು ಸಹ ಪ್ರಯಾಣಿಕರ ಹೇಳಿಕೆ ಪಡೆದುಕೊಂಡಿದ್ದಾರೆ.

ಮೇಲ್ನೋಟಕ್ಕೆ ಕಂಡಕ್ಟರ್​ನದ್ದೇ ತಪ್ಪು ಎಂದು ತಿಳಿದುಬಂದಿದ್ದು, ಆತನ ವಿರುದ್ಧ ಸೂಕ್ತ ಕ್ರಮ ಜರುಗಿಸುವ ಸಾಧ್ಯತೆ ಇದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries